ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ 23 ವರ್ಷದ ಯುವಕನ ಶವವನ್ನು ಭಯೋತ್ಪಾದಕ ಸಂಪರ್ಕದ ಆರೋಪದ ಮೇಲೆ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ನಂತರ ತಪ್ಪಿಸಿಕೊಳ್ಳುವ ಭರದಿಂದ ಹೊಳೆಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಹೊಳೆಗೆ ಹಾರಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಮೃತನನ್ನು ಇಮ್ತಿಯಾಜ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಲಷ್ಕರ್-ಎ-ತೊಯ್ಬಾ ಸ್ಲೀಪರ್ ಸೆಲ್ನ ಸದಸ್ಯನೆಂಬ ಅನುಮಾನದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದರು. ಓಡಿಹೋಗುವ ಪ್ರಯತ್ನದಲ್ಲಿ ವೇಗವಾಗಿ ಹರಿಯುವ ವೈಶೋ ಹೊಳೆಗೆ ಹಾರಿ ಮುಳುಗಿದ್ದಾನೆ.
ಪೊಲೀಸರ ಪ್ರಕಾರ, ಏಪ್ರಿಲ್ 23 ರಂದು ನಡೆದ ಎನ್ಕೌಂಟರ್ ತನಿಖೆಯ ಸಮಯದಲ್ಲಿ ಇಮ್ತಿಯಾಜ್ ಪಾತ್ರವು ಮುನ್ನೆಲೆಗೆ ಬಂದಿದೆ, ಅಲ್ಲಿ ಇಬ್ಬರು ಭಯೋತ್ಪಾದಕರು ಭದ್ರತಾ ಪಡೆಗಳೊಂದಿಗೆ ಸ್ವಲ್ಪ ಸಮಯದ ಗುಂಡಿನ ಚಕಮಕಿಯ ನಂತರ ತಪ್ಪಿಸಿಕೊಂಡನು. ವಿಚಾರಣೆಯ ಸಮಯದಲ್ಲಿ ಇಮ್ತಿಯಾಜ್ ಲಷ್ಕರ್ ಅಡಗುತಾಣದ ಬಗ್ಗೆ ತಿಳಿದಿದ್ದಾಗಿ ಒಪ್ಪಿಕೊಂಡಿದ್ದಾನೆ, ನಂತರ ಅವನನ್ನು ಆತ ಹೇಳುದ ಸ್ಥಳಕ್ಕೆ ಕರೆದೊಯ್ಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
#KulgamUpdate | Imtiyaz Ahmad Magray (23), who had confessed knowledge of terrorist hideouts, died by suicide after jumping into Vishaw Nallah while guiding forces to a second hideout near the river. Legal proceedings underway, sources confirm. pic.twitter.com/mgW1eOPojK
— Tejinder Singh Sodhi (@TejinderSsodhi) May 4, 2025