ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆ ಕಾಲು ಜಾರಿ ಕೆರೆಗೆ ಬಿದ್ದು ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಆನಂದಪುರ ಸಮೀಪದ ಗಿಳಾಲುಗುಂಡಿ ಅಮ್ಮನ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಮಹಿಳೆಯೊಬ್ಬರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ.

ಶಿವಮೊಗ್ಗ ತಾಲೂಕು ಕೋಣೆಹೊಸೂರು ಗ್ರಾಮದ ಗಾಯತ್ರಮ್ಮ(55) ಮೃತಪಟ್ಟವರು. ಅಮ್ಮನ ಕೆರೆಗೆ ಬಟ್ಟೆ ತೊಳೆಯಲು ಆಗಾಗ ಬರುತ್ತಿದ್ದ ಗಾಯತ್ರಮ್ಮ ಗುರುವಾರ ಸಂಜೆಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಮಕ್ಕಳಾದ ಲೋಹಿತ್ ಮತ್ತು ಗಣೇಶ್ ಹುಡುಕುತ್ತಾ ಕೆರೆ ದಂಡೆಯ ಬಳಿಗೆ ಬಂದಾಗ ಕೆರೆ ದಂಡೆಯಲ್ಲಿ ಚಪ್ಪಲಿ ಮತ್ತು ಅವರು ಬಳಸುವ ಬಟ್ಟೆಗಳು ಕಂಡುಬಂದಿವೆ. ಬಳಿಕ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿಗೆ ಕರೆ ಮಾಡಲಾಗಿದ್ದು, ಅವರು ಬಂದು ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read