ಈಶ್ವರಪ್ಪ ಸವಕಲು ನಾಣ್ಯ, ಹಾಗಾಗಿ ಟಿಕೆಟ್ ಕೊಡಲಿಲ್ಲ: ಸಿಎಂ ಸಿದ್ಧರಾಮಯ್ಯ

ಮೈಸೂರು: ಈಶ್ವರಪ್ಪ ಸವಕಲು ನಾಣ್ಯ. ಹಾಗಾಗಿ ಅವರಿಗೆ ಬಿಜೆಪಿಯವರು ಟಿಕೆಟ್ ಕೊಡಲಿಲ್ಲ. ಈಶ್ವರಪ್ಪ ಮಾತಿಗೆ ಬೆಲೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ, ಕಾಂತರಾಜು ವರದಿಗೆ ಕೆ.ಎಸ್. ಈಶ್ವರಪ್ಪ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತಾಗಿ ಪ್ರತಿಕ್ರಿಯೆ ನೀಡಿ ಈಶ್ವರಪ್ಪ ಸವಕಲು ನಾಣ್ಯ. ಹಾಗಾಗಿ ಅವರಿಗೆ ಬಿಜೆಪಿ ಟಿಕೆಟ್ ಕೊಡಲಿಲ್ಲ. ಈಶ್ವರಪ್ಪ ಮಾತುಗಳಿಗೆ ಬೆಲೆ ಇಲ್ಲ. ಕಾಂತರಾಜು ವರದಿ ಮಂಡಿಸುವಂತೆ ಸದನದಲ್ಲಿ ನನ್ನೊಂದಿಗೆ ಈಶ್ವರಪ್ಪ ಅವರು ಒತ್ತಾಯ ಮಾಡಿದ್ದಾರಲ್ಲ, ಈಗ ಅದನ್ನು ಸುಟ್ಟು ಹಾಕುತ್ತೇವೆ ಎಂದರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.

ಕಾಂತರಾಜು ಆಯೋಗದ ಜಾತಿ ಗಣತಿ ವರದಿ ಇನ್ನೂ ನನ್ನ ಕೈ ಸೇರಿಲ್ಲ. ಹೀಗಿರುವಾಗ, ನಾನೇಕೆ ವಿರೋಧ ಮಾಡಲಿ? ವರದಿಯಲ್ಲಿ ಏನೆಂಬುದೇ ಎಂದು ಗೊತ್ತಿಲ್ಲ. ವರದಿ ಸಲ್ಲಿಕೆಯಾದ ನಂತರ ನೋಡೋಣ ಎಂದು ಹೇಳಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read