ಪ್ರಯಾಣದ ವೇಳೆ ಗಗನಸಖಿಯ ಕೈಹಿಡಿದು ಅಸಭ್ಯ ವರ್ತನೆ: ಪ್ರಯಾಣಿಕ ಅರೆಸ್ಟ್

ಬೆಂಗಳೂರು: ಪ್ರಯಾಣದ ವೇಳೆ ಗಗನಸಖಿಯ ಕೈ ಹಿಡಿದು ಅಸಭ್ಯವಾಗಿ ವರ್ತಿಸಿದ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೋಲೀಸರು ಬಂಧಿಸಿದ್ದಾರೆ.

ರಾಜಸ್ಥಾನ ಮೂಲದ ರಣಧೀರ್ ಸಿಂಗ್(33) ಬಂಧಿತ ಆರೋಪಿ. ಇಂಡಿಗೋ ಏರ್ಲೈನ್ಸ್ ಭದ್ರತಾ ವ್ಯವಸ್ಥಾಪಕ ವರುಣ್ ಕುಮಾರ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ನವೆಂಬರ್ 17ರಂದು ಸಂಜೆ 6:40ಕ್ಕೆ ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಆರೋಪಿ ರಣಧೀರ್ ಸಿಂಗ್ ಪ್ರಯಾಣಿಸುತ್ತಿದ್ದ.

ವಿಮಾನ ಪ್ರಯಾಣದ ವೇಳೆ ಗಗನಸಖಿಯ ಕೈ ಹಿಡಿದು ಮೂರು ಬಾರಿ ಎಳೆದಾಡಿದ್ದು, ಅಸಭ್ಯವಾಗಿ ವರ್ತಿಸಿದ್ದಾನೆ. ಗಗನಸಖಿ ಎಚ್ಚರಿಕೆ ನೀಡಿದರೂ ದುರ್ವರ್ತನೆ ಮುಂದುವರೆಸಿದ ಆರೋಪಿ ಕುಳಿತಲ್ಲೇ ಮದ್ಯ ಸೇವಿಸಿ ಬೈದಾಡಿದ್ದಾನೆ. ವಿಮಾನ ಸಿಬ್ಬಂದಿ ಇಂಡಿಗೋ ಏರ್ಲೈನ್ಸ್ ಭದ್ರತಾ ವ್ಯವಸ್ಥಾಪಕರಿಗೆ ವಿಷಯ ತಿಳಿಸಿದ್ದಾರೆ.

ಮ್ಯಾನೇಜರ್ ವರುಣ್ ಕುಮಾರ್ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read