ಬಿಜೆಪಿ ಸಖ್ಯ ತೊರೆದ ಬಳಿಕವೂ ಉಪ ಸಭಾಪತಿ ಸ್ಥಾನ ತೊರೆಯದ ಹಿನ್ನೆಲೆ; JDU ಕಾರ್ಯಕಾರಿಣಿಯಿಂದ ಹರಿವಂಶ್ ಗೆ ಗೇಟ್ ಪಾಸ್

Bihar CM and JD-U supremo Nitish Kumar inaugurates the country's largest examination complex, ‘Bapu Examination Complex’, in Patna on Wednesday. The facility will be also used for free coaching programme for preparation of engineering and medical entrance examinations for meritorious students. (Santosh Kumar/HT)

ಬಿಹಾರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದ ನಿತೀಶ್ ಕುಮಾರ್ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಮೈತ್ರಿ ತೊರೆದಿದ್ದರು. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೇತರ ಪಕ್ಷಗಳ ಜೊತೆ ಕೈಜೋಡಿಸಲು ಮುಂದಾಗಿದ್ದಾರೆ.

ಇದರ ಮಧ್ಯೆ ತಮ್ಮ ಪಕ್ಷ ಬಿಜೆಪಿ ಜೊತೆ ಸಖ್ಯ ಕಡಿದುಕೊಂಡ ಬಳಿಕವೂ ರಾಜ್ಯಸಭಾ ಉಪಸಭಾಪತಿ ಸ್ಥಾನ ತೊರೆಯದ ಜೆಡಿಯು ಹಿರಿಯ ನಾಯಕ ಹರಿವಂಶ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಕೈ ಬಿಡಲಾಗಿದೆ.

ಇತ್ತೀಚೆಗೆ ಹರಿವಂಶ್ ಅವರು ಬಿಹಾರ ಮುಖ್ಯಮಂತ್ರಿ, ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಿದ್ದ ವೇಳೆ ರಾಜ್ಯಸಭಾ ಸ್ಥಾನ ತೊರೆಯುವಂತೆ ಅವರಿಗೆ ಸೂಚಿಸಲಾಗಿತ್ತು ಎನ್ನಲಾಗಿದೆ. ಆದರೆ ಇದಕ್ಕೆ ಹರಿವಂಶ್ ಮಣಿಯದ ಹಿನ್ನೆಲೆಯಲ್ಲಿ ಈಗ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಿಂದ ಕೈ ಬಿಡುವ ಮೂಲಕ ಪರೋಕ್ಷ ಎಚ್ಚರಿಕೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read