BREAKING : ಬಿಸಿಲು ನೋಡದೇ 1 ತಿಂಗಳಾಯಿತು, ನನಗೆ ಸ್ವಲ್ಪ ವಿಷ ಕೊಡಿ : ಜಡ್ಜ್ ಎದುರು ಕಣ್ಣೀರಿಟ್ಟ ನಟ ದರ್ಶನ್.!

ಬೆಂಗಳೂರು : ಬಿಸಿಲು ನೋಡದೇ 1 ತಿಂಗಳಾಯಿತು. ಕೈ ಎಲ್ಲಾ ಫಂಗಸ್ ಬಂದಿದೆ. ಜೈಲಿನಲ್ಲಿ ನರಕ ದರ್ಶನವಾಗುತ್ತಿದೆ. ದಯವಿಟ್ಟು ನನಗೆ ವಿಷ ಕೊಡಿ ಎಂದು ಕೋರ್ಟ್ ಗೆ ನಟ ದರ್ಶನ್ ಮನವಿ ಮಾಡಿದ್ದಾರೆ .

ಬೆಂಗಳೂರಿನ 57 ನೇ ಸಿಸಿಹೆಚ್ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಿತು. ವಿಡಿಯೋ ಕಾನ್ಪರೆನ್ಸ್ ಮೂಲಕ ನಟ ದರ್ಶನ್ ಅವರನ್ನು ಇಂದು ಕೋರ್ಟ್ ಗೆ ಹಾಜರುಪಡಿಸಲಾಯಿತು. ನಟ ದರ್ಶನ್ ದಿಂಬು, ಹಾಸಿಗೆ ನೀಡುವಂತೆ ಕೋರ್ಟ್’ಗೆ ಮನವಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಯುವ ವೇಳೆ ನಟ ದರ್ಶನ್ ಜಡ್ಜ್’ಗೆ ನನಗೆ ದಯವಿಟ್ಟು ವಿಷ ನೀಡಿ ಎಂದು ಮನವಿ ಸಲ್ಲಿಸಿದರು. ಆಗ ಜಡ್ಜ್ ಹಾಗೆಲ್ಲಾ ಮಾತನಾಡಬಾರದು ಎಂದು ತಿಳಿ ಹೇಳಿದರು.

ಜೈಲಿನಲ್ಲಿ ನಿತ್ಯ ನರಕದರ್ಶನ್ ಆಗುತ್ತಿದೆ. ಒಂದು ಮನವಿ ಇದೆ. ಬಿಸಿಲು ನೋಡಿ 1 ತಿಂಗಳಾಯಿತು. ದಯವಿಟ್ಟು ನನಗೆ ಸಲ್ಪ ವಿಷ ಕೊಡಿ ಎಂದು ಕೋರ್ಟ್ ಗೆ ನಟ ದರ್ಶನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ನಟ ದರ್ಶನ್ ಮನವಿಯ ಆದೇಶವನ್ನು ಕೋರ್ಟ್ ಪ್ರಕಟಿಸಲಿದೆ. ಮನೆ ಊಟ, ದಿಂಬು ಹಾಸಿಗೆ ಕೋರಿ ನಟ ದರ್ಶನ್ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಹಾಗೂ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವ ಆದೇಶ ಕೂಡ ಇಂದು ಕೋರ್ಟ್ ಪ್ರಕಟಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read