‘ಎಲ್ಲವೂ ಮುಗಿದುಹೋಯ್ತು’; ಐಶ್ವರ್ಯಾ- ಅಭಿ ಡಿವೋರ್ಸ್ ವದಂತಿ ನಡುವೆ ʼಬಿಗ್ ಬಿʼ ಕುತೂಹಲಕಾರಿ ಪೋಸ್ಟ್

ಬಾಲಿವುಡ್ ನ ತಾರಾ ಜೋಡಿಗಳಾದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನದ ವದಂತಿಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಈ ಮೂಲಕ ಅಮಿತಾಬ್ ಬಚ್ಚನ್ ಮತ್ತು ಅವರ ಕುಟುಂಬವು ಆಗಾಗ್ಗೆ ಸುದ್ದಿಯಾಗುತ್ತಿರುತ್ತದೆ. ಈ ನಡುವೆ ತಮ್ಮ ಬಿಡುವಿಲ್ಲದ ಸಮಯದಲ್ಲೂ ಅಮಿತಾಬ್ ಬಚ್ಚನ್ ಬ್ಲಾಗ್ ನಲ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದು ಎಲ್ಲವೂ ಮುಗಿದು ಹೋಗಿದೆ ಎಂದಿರುವುದರ ಅರ್ಥ ಏನು ಎಂಬುದು ಕುತೂಹಲ ಕೆರಳಿಸಿದೆ.

“ನಾನು ಕನ್ನಡಿಯಲ್ಲಿ ನೋಡಿದಾಗ ನನಗೆ ಆಶ್ಚರ್ಯವಾಯಿತು; ನಾನು ಈಗ ನೋಡುತ್ತಿರುವ ಈ ಮುಖವು ಕೆಲವು ವರ್ಷಗಳ ಹಿಂದೆ ಇನ್ನೊಂದರಲ್ಲಿ ಬೇರೆಯದೇ ಆಗಿತ್ತು. ನನ್ನ ಈ ಮುಖದ ಹೊರತಾಗಿಯೂ ಅವರು ನನಗೆ ಹೆಚ್ಚು ಸಮಯ ಪ್ರೀತಿ ಮತ್ತು ಗಮನವನ್ನು ನೀಡಿದವರು ಯಾವ ಮುಖದೊಂದಿಗೆ ಸಂಬಂಧ ಹೊಂದುತ್ತಾರೆ ಎಂದು ಆಶ್ಚರ್ಯ ಪಡುತ್ತೇನೆ. ನಾನು ನನ್ನ ಕಿಟಕಿಯ ಕೆಳಗಿನಿಂದ ಹರ್ಷೋದ್ಗಾರವನ್ನು ಕೇಳುತ್ತೇನೆ ಮತ್ತು ಭರವಸೆಯಿಂದ ನನ್ನನ್ನು ಸಮಾಧಾನಪಡಿಸುತ್ತೇನೆ. ಆದರೆ ಜೀವನ ಮತ್ತು ಗಮನವು ಅಲ್ಪಕಾಲಿಕವಾಗಿದೆ……. ಜೀವನವು ಬರಿದಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ, ಗಮನವು ಒಣಗುತ್ತದೆ ಮತ್ತು ಅದು ಅಂತಿಮವಾಗಿ ಕೊನೆಗೊಳ್ಳುತ್ತದೆ …… ಒಂದೇ ಒಂದು ಸಾಮ್ಯತೆ ಇದೆ – ಇದು ಅಂತಿಮವಾಗಿ ಕೊನೆಗೊಳ್ಳುತ್ತದೆ !” ಎಂದು ಅಮಿತಾಭ್‌ ಬಚ್ಚನ್‌ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ. ಅವರ ಈ ನಿಗೂಢ ಪೋಸ್ಟ್‌ ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಾಗಿನಿಂದ ಭಾರೀ ಚರ್ಚೆಯಾಗುತ್ತಿದೆ.

ಇದರೊಂದಿಗೆ ಗಣೇಶ ಚತುರ್ಥಿ ಆಚರಣೆಯನ್ನು ಉಲ್ಲೇಖಿಸಿ “ಗಣಪತಿಯ ಹಬ್ಬ ಪ್ರಾರಂಭವಾಗಿದೆ ಮತ್ತು ಶಕ್ತಿಶಾಲಿ ರಕ್ಷಕನು ನಮಗೆಲ್ಲರಿಗೂ ಶಾಂತಿ ಮತ್ತು ಸಾಧನೆಯ ಹಾದಿಯಲ್ಲಿ ಮಾರ್ಗದರ್ಶನ ನೀಡಲಿ. ಅವನಿಗಾಗಿ ನಮ್ಮ ಪ್ರಾರ್ಥನೆಗಳು ” ಎಂದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read