BREAKING : ರಾಮನಗರದಲ್ಲಿ ಅಮಾನುಷ ಘಟನೆ : 1 ವರ್ಷದ ಹೆತ್ತ ಮಗುವನ್ನೇ ನದಿಗೆ ಎಸೆದು ಕೊಂದ ತಾಯಿ

ರಾಮನಗರ : ರಾಮನಗರದಲ್ಲಿ ಅಮಾನುಷ ಘಟನೆ ನಡೆದಿದ್ದು, 1 ವರ್ಷದ ಹೆತ್ತ ಮಗುವನ್ನೇ ತಾಯಿ ನದಿಗೆ ಎಸೆದು ಕೊಂದ ಘಟನೆ ವರದಿಯಾಗಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕು ಕಾಲಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭಾಗ್ಯ (21) ಎಂಬ ಮಹಿಳೆ ತನ್ನ 1 ವರ್ಷದ ಮೂರು ತಿಂಗಳ ಮಗು ( ದೇವರಾಜ್ ) ವನ್ನು ಹತ್ಯೆ ಮಾಡಿದ್ದಾಳೆ ಎಂದು ಹೇಳಲಾಗಿದೆ.

ಬಟ್ಟೆ ತೊಳೆಯುವ ವಿಚಾರದಲ್ಲಿ ಭಾಗ್ಯ ತನ್ನ ತಾಯಿ ಜೊತೆ ಗಲಾಟೆ ಮಾಡಿದ್ದಾಳೆ.  ನಂತರ  ಸಿಟ್ಟಿನಿಂದ ಮಹಿಳೆ ಭಾಗ್ಯ ಮಗುವನ್ನು ಕಣ್ವ  ಹೊಳೆಗೆ  ಎಸೆದಿದ್ದಾಳೆ.  ಬಳಿಕ ದೇವಸ್ಥಾನವೊಂದರ ಬಳಿ ಬಂಧು ರೋಧಿಸಿದ್ದಾಳೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಭಾಗ್ಯಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

 

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read