ಬೆಂಗಳೂರು: ರಾಜ್ಯದಲ್ಲಿ ಕಳೆದ 4-5 ದಿನಗಳಿಂದ ಮಳೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಜೂನ್ 10ರ ನಂತರ ಮಳೆ ಮತ್ತೆ ಚುರುಕಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 6ರಿಂದ 9ರವರೆಗೆ ರಾಜ್ಯಾದ್ಯಂತ ಅತಿ ಸಾಧಾರಣ ಮಳೆಯಾಗಲಿದೆ. ಜೂನ್ 10 ರಿಂದ 12 ರವರೆಗೆ ಸಾಧಾರಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಬಹುತೇಕ ಭಾಗದಲ್ಲಿ ಮಳೆ ಇಲ್ಲವಾಗಿದ್ದು, ಬೇಸಿಗೆ ಬಿಸಿಲಿನ ವಾತಾವರಣ ಉಂಟಾಗಿದೆ. ಮಳೆ ಬಿಡುವು ನೀಡಿದ್ದರಿಂದ ರೈತರು ಬಿತ್ತನೆಗಾಗಿ ಭೂಮಿ ಸಿದ್ದಮಾಡಿಕೊಳ್ಳತೊಡಗಿದ್ದಾರೆ. ಕೆಲವು ಕಡೆ ಬೇಸಿಗೆ ಭತ್ತದ ಕೊಯ್ಲು ನಡೆದಿದೆ.