BREAKING : ನಟ ಕಿಚ್ಚ ಸುದೀಪ್ ಮನೆ ಮುಂದೆ ಹೈಡ್ರಾಮಾ : ‘ಬಿಗ್ ಬಾಸ್’ ನಲ್ಲಿ ಅವಕಾಶ ನೀಡುವಂತೆ ರೈತನಿಂದ ಧರಣಿ

ಬೆಂಗಳೂರು : ನಟ ಕಿಚ್ಚ ಸುದೀಪ್ ಮನೆ ಮುಂದೆ ಹೈಡ್ರಾಮಾ ನಡೆದಿದ್ದು, ಬಿಗ್ ಬಾಸ್ ನಲ್ಲಿ ಅವಕಾಶ ನೀಡುವಂತೆ ರೈತ ಪಟ್ಟು ಹಿಡಿದು ಧರಣಿ ಕುಳಿತ ಘಟನೆ ನಡೆದಿದೆ.

ಬೆಂಗಳೂರಿನ ನಟ ಕಿಚ್ಚ ಸುದೀಪ್ ನಿವಾಸದ ಮುಂದೆ ಈ ಘಟನೆ ನಡೆದಿದೆ. ಮೈಸೂರಿನ ತಿ. ನರಸೀಪುರದಿಂದ ಎತ್ತಿನಗಾಡಿ ಮೂಲಕ ನಟ ಕಿಚ್ಚ ಸುದೀಪ್ ನಿವಾಸಕ್ಕೆ ಆಗಮಿಸಿದ್ದಾರೆ. ‘ನಮ್ಮ ನಡೆಗೆ ಬಿಗ್ ಬಾಸ್ ಕಡೆಗೆ’ ಎಂದು ಎತ್ತಿನಗಾಡಿಯಲ್ಲಿ ಬ್ಯಾನರ್ ಹಾಕಿದ ರೈತ ನಟ ಸುದೀಪ್ ನಿವಾಸದ ಎದುರು ಧರಣಿ ನಡೆಸಿದ್ದಾರೆ.

ಎಲ್ಲರಿಗೂ ಅವಕಾಶ ಕೊಡುತ್ತೀರಿ..ರೈತರಿಗೂ ಅವಕಾಶ ನೀಡಿ..ನಮಗೆ ಯಾಕೆ ಅವಕಾಶ ಕೊಡಲ್ಲ…ಎಂದು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ನಂತರ ಸುದೀಪ್ ಮನೆಯಲ್ಲಿ ಇಲ್ಲ ಎಂದು ಸೆಕ್ಯೂರಿಟಿ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read