ತಡರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಮಾನ ತುರ್ತು ಭೂಸ್ಪರ್ಶ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿಮಾನ ಬುಧವಾರ ರಾತ್ರಿ ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಅಗರ್ತಲಾಕ್ಕೆ ತೆರಳುತ್ತಿದ್ದ ಗೃಹ ಸಚಿವರು ಪ್ರತಿಕೂಲ ಹವಾಮಾನದ ಕಾರಣದಿಂದ ಇಳಿಯಲು ಸಾಧ್ಯವಾಗಲಿಲ್ಲ.

ಗುವಾಹಟಿಯ ಹೋಟೆಲ್ ರಾಡಿಸನ್ ಬ್ಲೂನಲ್ಲಿ ಅಮಿತ್ ಶಾ ರಾತ್ರಿಯನ್ನು ಕಳೆದಿದ್ದಾರೆ. ತ್ರಿಪುರಾದಲ್ಲಿ ವಿಧಾನಸಭಾ ಚುನಾವಣೆಗಾಗಿ ರಥಯಾತ್ರೆ ಉದ್ಘಾಟಿಸಲು ಗುರುವಾರ ಬೆಳಿಗ್ಗೆ ಅಗರ್ತಲಾಗೆ ತೆರಳಲಿದ್ದಾರೆ.

ಸಚಿವ ಅಮಿತ್ ಶಾ ಗುವಾಹಟಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿದರು. ಅವರನ್ನು ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ ಬರಮಾಡಿಕೊಂಡರು. ಶಾ ರಾತ್ರಿಯೇ ಅಗರ್ತಲಾ ತಲುಪಬೇಕಿತ್ತು. ಆದರೆ ಅಗರ್ತಲಾದಲ್ಲಿ ಪ್ರತಿಕೂಲ ಹವಾಮಾನದಿಂದಾಗಿ ಅವರ ವಿಮಾನವು 10:45 ರ ಸುಮಾರಿಗೆ ಗುವಾಹಟಿಯಲ್ಲಿ ಇಳಿಯಬೇಕಾಯಿತು.

ಬಿಜೆಪಿಯ “ಜನ ಬಿಸ್ವಾಸ್ ರಥ ಯಾತ್ರೆ”ಗೆ ಚಾಲನೆ ನೀಡಲಿರುವ ಅಮಿತ್ ಶಾ ನಂತರ ಧರ್ಮನಗರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read