ಹಿಟ್ ಅಂಡ್ ರನ್ ಕೇಸ್ ಪತ್ತೆ ಹಚ್ಚಿದ ಪೊಲೀಸರು: ಆಟೋ ಚಾಲಕನ ಸಾವಿಗೆ ಕಾರಣನಾದ ಬೈಕ್ ಸವಾರ ಅರೆಸ್ಟ್

ಬೆಂಗಳೂರು: ಹಿಟ್ ಅಂಡ್ ರನ್ ಕೇಸ್ ಪತ್ತೆ ಹಚ್ಚಿದ ಬಸವನಗುಡಿ ಠಾಣೆ ಪೊಲೀಸರು ಅಪಘಾತ ಮಾಡಿ ಪರಾರಿಯಾಗಿದ್ದ ಬೈಕ್ ಸವಾರ ವೇಣು ಎಂಬುವನನ್ನು ಬಂಧಿಸಿದ್ದಾರೆ.

ಬೈಕ್ ನಿಂದ ಆಟೋಗೆ ಡಿಕ್ಕಿ ಹೊಡೆದು ಆರೋಪಿ ಪರಾರಿಯಾಗಿದ್ದ. ಫೆಬ್ರವರಿ 12ರಂದು ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಅಪಘಾತದಲ್ಲಿ ಆಟೋ ಚಾಲಕ ರಮೇಶ್(48) ಮೃತಪಟ್ಟಿದ್ದರು. ಬೈಕ್ ಸವಾರನ ಅತಿ ವೇಗ ಮತ್ತು ಅಜಾಗರೂಕತೆಯಿಂದ ಅಪಘಾತ ಸಂಭವಿಸಿತ್ತು.

ಪ್ರಕರಣ ದಾಖಲಿಸಿಕೊಂಡಿದ್ದ ಬಸವನಗುಡಿ ಸಂಚಾರ ಠಾಣೆ ಪೊಲೀಸರು ಎರಡು ದಿನಗಳ ಕಾಲ ಸಿಸಿಟಿವಿ ಪರಿಶೀಲನೆ ಬಳಿಕ ಆರೋಪಿಯನ್ನು ಬಂಧಿಸಿದ್ದಾರೆ. 70ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗಿತ್ತು. ಬಸವನಗುಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read