BREAKING : ಬೆಳಗಾವಿಯಲ್ಲಿ ವಿದ್ಯುತ್  ಪ್ರವಹಿಸಿ  ‘ಹೆಸ್ಕಾಂ ಸಿಬ್ಬಂದಿ’ ಸಾವು , 3 ಗಂಟೆ ಕಂಬದಲ್ಲೇ ನೇತಾಡಿದ ಶವ.!

ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಕರ್ತವ್ಯದ ವೇಳೆ ವಿದ್ಯುತ್ ಪ್ರವಹಿಸಿ ಹೆಸ್ಕಾಂ ಸಿಬ್ಬಂದಿ ಮೃತಪಟ್ಟಿದ್ದಾರೆ.

ಬೆಳಗಾವಿ ಜಿಲ್ಲೆ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ಹೆಸ್ಕಾಂ ಸಿಬ್ಬಂದಿ ಮಾರುತಿ ಹವಲಿ (25) ಎಂದು ಗುರುತಿಸಲಾಗಿದೆ. ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುವಾಗ ವಿದ್ಯುತ್ ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಾರುತಿ ಹವಲಿ ಬಲಿಯಾಗಿದ್ದು, ಸುಮಾರು 3 ಗಂಟೆ ಕಂಬದಲ್ಲೇ ಮಾರುತಿ ಮೃತದೇಹ ನೇತಾಡಿದೆ. ಘಟನೆ ನಡೆದು 3 ಗಂಟೆಯಾದರೂ ಯಾವ ಅಧಿಕಾರಿಗಳು ಬರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

  • ಹೌದು (53%, 153 Votes)
  • ಇಲ್ಲ (36%, 104 Votes)
  • ಹೇಳಲಾಗುವುದಿಲ್ಲ (11%, 33 Votes)

Total Voters: 290

Loading ... Loading ...

Most Read