KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಬ್ಯಾಂಕ್ ಖಾತೆ ತೆರೆಯದ `ಪಡಿತರ ಚೀಟಿದಾರ’ರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

Published July 14, 2023 at 12:14 pm
Share
SHARE

ರಾಜ್ಯ ಸರ್ಕಾರದ ಆದೇಶದಂತೆ ಅಂತ್ಯೋದಯ(ನಾಲ್ಕು ಅಥವಾ ನಾಲ್ಕಕ್ಕಿಂತ  ಹೆಚ್ಚು ಸದಸ್ಯರು) ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ 5 ಕೆ.ಜಿ ಆಹಾರಧಾನ್ಯವನ್ನು ಸೇರಿಸಿ ಪ್ರತಿ ತಿಂಗಳು ಪ್ರತಿ ಫಲಾನುಭವಿಗೆ ತಲಾ 10 ಕೆಜಿ ಆಹಾರಧಾನ್ಯ ಉಚಿತವಾಗಿ ವಿತರಿಸಲು ಸರ್ಕಾರ ನಿರ್ಧರಿಸಿದ್ದು,  ಈ ಬಗ್ಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಬಿಡ್ದಾರರು ಆಹಾರಧಾನ್ಯವನ್ನು ಸರಬರಾಜು ಮಾಡುವವರೆಗೆ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು 5 ಕೆ.ಜಿ ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿಗೆ ರೂ.34/-ರಂತೆ ಪಡಿತರ ಚೀಟಿದಾರರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣವನ್ನು ವರ್ಗಾಯಿಸಬೇಕಾಗಿರುತ್ತದೆ.

 ಪಡಿತರ ಚೀಟಿಯಲ್ಲಿ ಕಡ್ಡಾಯವಾಗಿ ಕುಟುಂಬದ ಮುಖ್ಯಸ್ಥರು ನಮೂದಾಗಿರಬೇಕು  ಕುಟುಂಬದ ಮುಖ್ಯಸ್ಥರು  ನಿಧನಹೊಂದಿದ್ದಲ್ಲಿ, ಸಂಬಂಧಪಟ್ಟ  ತಾಲೂಕಿನ  ಆಹಾರ  ಶಾಖೆಗೆ  ಭೇಟಿ  ನೀಡಿ,  ಆಹಾರ  ನಿರೀಕ್ಷಕರಿಗೆ ಈ  ಬಗ್ಗೆ  ಮಾಹಿತಿ  ನೀಡಿ,  ಮೃತರ ಹೆಸರನ್ನು  ಪಡಿತರ  ಚೀಟಿಯಿಂದ  ತೆಗೆದು ಹಾಕಿ, ಇ-ಕೆವೈಸಿ  ಮೂಲಕ  ಕುಟುಂಬದ ಮುಖ್ಯಸ್ಥರನ್ನು  ನಮೂದು  ಮಾಡಿಕೊಳ್ಳಬೇಕು. ಒಂದಕ್ಕಿAತ ಹೆಚ್ಚು ಕುಟುಂಬದ ಮುಖ್ಯಸ್ಥರು ನಮೂದಾಗಿದ್ದಲ್ಲಿ ಅಂತಹವರಿಗೆ ನಗದು ವರ್ಗಾವಣೆಗೆ ಅವಕಾಶವಿರುವುದಿಲ್ಲ.

ಬ್ಯಾಂಕ್ ಖಾತೆ ಚಾಲ್ತಿಯಲ್ಲಿಲ್ಲದ, ಬ್ಯಾಂಕ್ ಖಾತೆ ಹೊಂದಿರದ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರದ ಪಡಿತರ ಚೀಟಿದಾರರ ಮಾಹಿತಿಯನ್ನು ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪ್ರಚುರಪಡಿಸಿದ್ದು, ಪಡಿತರ ಚೀಟಿದಾರರು ಮಾಹಿತಿಯನ್ನು ಪಡೆದು ಕೂಡಲೇ ಬ್ಯಾಂಕ್ ಖಾತೆಯನ್ನು ತೆರೆಯುವ ಬಗ್ಗೆ/ಚಾಲ್ತಿಗೊಳಿಸುವ ಬಗ್ಗೆ ಕ್ರಮವಹಿಸಬೇಕು. ಇಲ್ಲವಾದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಜುಲೈ 2023 ಮಾಹೆಯಲ್ಲಿ ನಗದು ವರ್ಗಾವಣೆ ಆಗುವುದಿಲ್ಲ.

 ಈ ಫಲಾನುಭವಿಗಳು 2023 ರ ಜುಲೈ 20 ರ ಒಳಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಚಾಲ್ತಿಗೊಳಿಸಿದಲ್ಲಿ ಅಗಸ್ಟ್ ತಿಂಗಳಲ್ಲಿ ನಗದು ವರ್ಗಾವಣೆ ಮೂಲಕ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.

ಪಡಿತರ  ಚೀಟಿದಾರರು  ನೇರ  ನಗದು ವರ್ಗಾವಣೆ ಪ್ರಯೋಜನ ಪಡೆಯಲು  ಪ್ರತ್ಯೇಕವಾಗಿ ಅರ್ಜಿ  ಸಲ್ಲಿಸುವ  ಅವಶ್ಯಕತೆ  ಇರುವುದಿಲ್ಲ. ಪಡಿತರ ಚೀಟಿದಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ  ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ವತಿಯಿಂದ ಬ್ಯಾಂಕ್ ಖಾತೆ ತೆರೆಯುವ ಸಂಬAಧ  ಕ್ರಮವಹಿಸಲಿದ್ದು, ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ಸಿಬ್ಬಂದಿಗಳು ಶಿಬಿರವನ್ನು ನಡೆಸಿ ಸದ್ರಿ ಫಲಾನುಭವಿಗಳಿಗೆ ಆ ಕೂಡಲೇ ಬ್ಯಾಂಕ್ ಅಕೌಂಟ್ ತೆರೆದು ನೀಡುವರು. ಈ ಸಂಬAಧ ಸದ್ರಿ ಪಡಿತರ ಚೀಟಿಯ ಕುಟುಂಬದ ಮುಖ್ಯಸ್ಥರು ಓಟಿಪಿ ಸ್ವೀಕರಿಸಬೇಕಾದ ಮೊಬೈಲ್, ಆಧಾರ್ ಕಾರ್ಡ್ ಪ್ರತಿ, ತರಬೇಕು.

 ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್  ವತಿಯಿಂದ ಈ ಕೆಳಕಂಡ ತಾಲೂಕುಗಳಲ್ಲಿ ನಿಗಧಿತ ದಿನಾಂಕಗಳAದು ಶಿಬಿರ ಆಯೋಜಿಸಲಾಗುವುದು.

 ಉಡುಪಿ ತಾಲೂಕಿನಲ್ಲಿ ಜುಲೈ 14 ರಂದು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ಕಚೇರಿ, ಜು. 18 ರಂದು ಉದ್ಯಾವರ ಗ್ರಾಮ ಪಂಚಾಯತ್ ಕಚೇರಿ, ಜು. 19 ರಂದು ಉಡುಪಿ ತಾಲೂಕು ಕಚೇರಿಯ ಆಹಾರ ಶಾಖೆ, ಜು. 20 ರಂದು ಕಲ್ಯಾಣಪುರ ಗ್ರಾಮ ಪಂಚಾಯತ್ ಕಚೇರಿ ಹಾಗೂ ಮಲ್ಪೆ ಅಂಚೆ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು.

ಕಾಪು ತಾಲೂಕಿಗೆ ಸಂಬAಧಿಸಿದAತೆ ಜು. 15 ರಂದು ಕಾಪು ಅಂಚೆ ಕಚೇರಿ, ಜು. 17 ರಂದು ಕಟಪಾಡಿ ಗ್ರಾಮ ಪಂಚಾಯತ್, ಜು. 20 ರಂದು ಶಿರ್ವ ಅಂಚೆ ಕಚೇರಿ ಹಾಗೂ ಪಡುಬಿದ್ರೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗುವುದು.

 ಬ್ರಹ್ಮಾವರ ತಾಲೂಕಿನಲ್ಲಿ ಜು. 14 ರಂದು ಮಂದಾರ್ತಿ ಅಂಚೆ ಕಚೇರಿ, ಜು. 17 ರಂದು ಬ್ರಹ್ಮಾವರ ಅಂಚೆ ಕಚೇರಿ ಹಾಗೂ ಜು. 18 ರಂದು ಕೋಟಾ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಕುಂದಾಪುರ ತಾಲೂಕಿನಲ್ಲಿ ಜು. 15 ರಂದು ಸಿದ್ಧಾಪುರ ಗ್ರಾಮ ಪಂಚಾಯತ್, ಜು. 19 ರಂದು ಹಾಲಾಡಿ ಗ್ರಾಮ ಪಂಚಾಯತ್ ಕಚೇರಿ ಹಾಗೂ ಜು. 20 ರಂದು ವಂಡ್ಸೆ ಅಂಚೆ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಬೈಂದೂರು ತಾಲೂಕಿನಲ್ಲಿ ಜು. 15 ರಂದು ಹಳ್ಳಿಹೊಳೆ ಗ್ರಾಮ ಪಂಚಾಯತ್, ಜು. 17 ರಂದು ಬೈಂದೂರು ತಾಲೂಕು ಕಚೇರಿ ಆಹಾರ ಶಾಖೆ, ಜು. 20 ರಂದು ಕೊಲ್ಲೂರು ಗ್ರಾಮ ಪಂಚಾಯತ್ ಕಚೇರಿ ಹಾಗೂ ಮರವಂತೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ಏರ್ಪಡಿಸಲಾಗುವುದು.

ಕಾರ್ಕಳ ತಾಲೂಕಿನಲ್ಲಿ ಜು. 17 ರಂದು ಕಾರ್ಕಳ ತಾಲೂಕು ಕಚೇರಿ, ನಲ್ಲೂರು ಗ್ರಾಮ ಪಂಚಾಯತ್ ಹಾಗೂ ಬೆಳ್ಮಣ್ ಗ್ರಾಮ ಪಂಚಾಯತ್ ಕಚೇರಿಯಲ್ಲಿ, ಜು. 18 ರಂದು ಅಜೆಕಾರು ನಾಡ ಕಚೇರಿ, ಮಾಳ ಗ್ರಾಮ ಪಂಚಾಯತ್ ಕಚೇರಿಗಳಲ್ಲಿ ಹಾಗೂ ಈದು ಗ್ರಾಮ ಪಂಚಾಯತ್ ಕಚೇರಿಯಲ್ಲಿ ಶಿಬಿರ ನಡೆಯಲಿದೆ.

ಹೆಬ್ರಿ ತಾಲೂಕಿನಲ್ಲಿ ಜು. 15 ರಂದು ಹೆಬ್ರಿ ತಾಲೂಕು ಕಚೇರಿ, ಬೆಳ್ವೆ ಅಂಚೆ ಕಚೇರಿ ಹಾಗೂ ಮುದ್ರಾಡಿ ಅಂಚೆ ಕಚೇರಿಗಳಲ್ಲಿ ಶಿಬಿರ ಏರ್ಪಡಿಸಲಾಗುವುದು.   ಸಾರ್ವಜನಿಕರು   ಪಡಿತರ  ಹಣ   ವರ್ಗಾವಣೆ  ಬಗ್ಗೆ ವೆಬ್ ಸೈಟ್  ಮೂಲಕ  ನೇರ  ನಗದು  ಪಾವತಿಯಾದ  ಕುರಿತು  ಪರಿಶೀಲಿಸಬಹುದಾಗಿದೆ.   ಹೆಚ್ಚಿನ  ಮಾಹಿತಿಗಾಗಿ  ಸಂಬಂಧಪಟ್ಟ  ತಾಲೂಕು ಆಹಾರ  ಶಾಖೆಯನ್ನು ಸಂಪರ್ಕಿಸುವAತೆ ಹಾಗೂ ಸಾರ್ವಜನಿಕರು ಈ ಯೋಜನೆಯ  ಪ್ರಯೋಜನ  ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You Might Also Like

Watch Video: ಆಕಾಶದಿಂದ ಬಿದ್ದ ನಿಗೂಢ ಗೋಳ ; ಅನ್ಯಗ್ರಹ ಲೋಕದ ಸಂದೇಶವೆಂಬ ಕುತೂಹಲ !

BIG NEWS : ಪುತ್ರನನ್ನು ಲಾಲೂ ಉಚ್ಚಾಟಿಸಿದ್ದರ ಹಿಂದಿದೆಯಾ ʼರಾಜಕೀಯʼ ? ಐಶ್ವರ್ಯಾ ರೈ ಅವರಿಂದ ಗಂಭೀರ ಆರೋಪ !

ರಾಜ್ಯದಲ್ಲಿ ಕೈಗಾರಿಕಾ ಕ್ರಾಂತಿ: ಹೆಲಿಕಾಪ್ಟರ್ ಘಟಕ ಸೇರಿ 16 ಸಾವಿರ ಕೋಟಿ ರೂ. ಭಾರೀ ಹೂಡಿಕೆ, ಉದ್ಯೋಗ ಸೃಷ್ಟಿ ಯೋಜನೆಗೆ ಅನುಮೋದನೆ

ನಂಬಲಸಾಧ್ಯವಾದರೂ ಇದು ಸತ್ಯ: 23 ತಿಂಗಳಲ್ಲಿ 124 ಕೆಜಿ ತೂಕ ಇಳಿಸಿಕೊಂಡ ಭೂಪ ; ಕೊನೆಗೂ ಬಯಲಾಯ್ತು ರಹಸ್ಯ !

‘ಭಾಗ್ಯಲಕ್ಷ್ಮಿ’ ಯೋಜನೆ ಫಲಾನುಭವಿಗಳಿಗೆ ಶುಭ ಸುದ್ದಿ: ಖಾತೆಗೆ ಪರಿಪಕ್ವ ಮೊತ್ತ ಪಾವತಿ

TAGGED:Ration cardರೇಷನ್ ಕಾರ್ಡ್bank accountಬ್ಯಾಂಕ್ ಖಾತೆಅನ್ನಭಾಗ್ಯAnnabhagyaಶಿಬಿರ ಆಯೋಜನೆcamp organized
Share This Article
Facebook Copy Link Print

Latest News

Watch Video: ಆಕಾಶದಿಂದ ಬಿದ್ದ ನಿಗೂಢ ಗೋಳ ; ಅನ್ಯಗ್ರಹ ಲೋಕದ ಸಂದೇಶವೆಂಬ ಕುತೂಹಲ !
BIG NEWS : ಪುತ್ರನನ್ನು ಲಾಲೂ ಉಚ್ಚಾಟಿಸಿದ್ದರ ಹಿಂದಿದೆಯಾ ʼರಾಜಕೀಯʼ ? ಐಶ್ವರ್ಯಾ ರೈ ಅವರಿಂದ ಗಂಭೀರ ಆರೋಪ !
ರಾಜ್ಯದಲ್ಲಿ ಕೈಗಾರಿಕಾ ಕ್ರಾಂತಿ: ಹೆಲಿಕಾಪ್ಟರ್ ಘಟಕ ಸೇರಿ 16 ಸಾವಿರ ಕೋಟಿ ರೂ. ಭಾರೀ ಹೂಡಿಕೆ, ಉದ್ಯೋಗ ಸೃಷ್ಟಿ ಯೋಜನೆಗೆ ಅನುಮೋದನೆ
ನಂಬಲಸಾಧ್ಯವಾದರೂ ಇದು ಸತ್ಯ: 23 ತಿಂಗಳಲ್ಲಿ 124 ಕೆಜಿ ತೂಕ ಇಳಿಸಿಕೊಂಡ ಭೂಪ ; ಕೊನೆಗೂ ಬಯಲಾಯ್ತು ರಹಸ್ಯ !

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

ಬಿಪಿಎಲ್ ಕಾರ್ಡ್ ದಾರರಿಗೆ ಗುಡ್ ನ್ಯೂಸ್: ಮೂರು ತಿಂಗಳ ಪಡಿತರ ಮುಂಗಡ ವಿತರಣೆಗೆ ಆದೇಶ
BREAKING : ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ:  ‘IPL’ ಕ್ರಿಕೆಟ್ ಟೂರ್ನಿ ರದ್ದುಗೊಳಿಸಿ ‘BCCI’ ಆದೇಶ
BIG NEWS: ಮಗಳ ಹತ್ಯೆಗೆ ಪ್ರತಿಕಾರ: ಆರೋಪಿಯ ತಂದೆಯನ್ನೇ ಬರ್ಬರವಾಗಿ ಕೊಲೆಗೈದ ಅಪ್ಪ!
BREAKING : ‘ಮಡೆನೂರು ಮನು’ ಬೆನ್ನಲ್ಲೇ ಹಾಸ್ಯನಟ ಅಪ್ಪಣ್ಣ ವಿರುದ್ಧ ಗಂಭೀರ ಆರೋಪ ಮಾಡಿದ ಸಂತ್ರಸ್ತೆ.!

Automotive

ಹೊಸ ಬಣ್ಣ, ಹೊಸ ನಿಯಮ ! 2025ರ ಸುಜುಕಿ ಹಯಾಬುಸಾ ರಿಲೀಸ್‌ !
ಟ್ರಕ್ ಗಳಿಗೂ ಸುರಕ್ಷತಾ ಮೌಲ್ಯಮಾಪನ ರೇಟಿಂಗ್ ಪ್ರಾರಂಭಿಸಲು ಸರ್ಕಾರ ಚಿಂತನೆ
ತೇಜ್ ಪ್ರತಾಪ್ ಸ್ಕೂಟರ್ ಸವಾರಿ ; ನಿತೀಶ್ ನಿವಾಸದ ಮುಂದೆ ಗದ್ದಲ | Watch Video

Entertainment

BREAKING NEWS: ಬಾಲಿವುಡ್ ನಟ ದೇಬ್ ಮುಖರ್ಜಿ ಇನ್ನಿಲ್ಲ
BIG NEWS : ರೇಣುಕಾಸ್ವಾಮಿ ಕೊಲೆ ಕೇಸ್ : ಸಾಕ್ಷಿದಾರನ ಜೊತೆ ಸಿನಿಮಾ ವೀಕ್ಷಿಸಿದ ನಟ ದರ್ಶನ್ ಗೆ ಸಂಕಷ್ಟ..?
ಅಲ್ಲು ಅರ್ಜುನ್-ತ್ರಿವಿಕ್ರಮ್ ಕಾಂಬಿನೇಶನ್‌ನಲ್ಲಿ ʼಪೌರಾಣಿಕʼ ಚಿತ್ರ ; ಅಭಿಮಾನಿಗಳಲ್ಲಿ ಹೆಚ್ಚಿದ ಉತ್ಸಾಹ !

Sports

ಪಂಜಾಬ್ ಮಣಿಸಿ IPL ಫೈನಲ್ ಪ್ರವೇಶಕ್ಕೆ RCB ಸಜ್ಜು
IPL 2025 ಪ್ಲೇಆಫ್ ವೇಳಾಪಟ್ಟಿ ಅಂತಿಮ: ಯಾವ ತಂಡ ಯಾರ ವಿರುದ್ಧ ಆಡುತ್ತದೆ ? ಇಲ್ಲಿದೆ ಸಂಪೂರ್ಣ ವಿವರ !
ಕಿಂಗ್ ಕೊಹ್ಲಿ ಹೊಸ ಇತಿಹಾಸ: ಆರ್‌ಸಿಬಿ ಪರ 9000 ರನ್, ಐಪಿಎಲ್‌ನಲ್ಲಿ ಐದು ಬಾರಿ 600+ ರನ್ ಗಳಿಸಿದ ಮೊದಲ ಬ್ಯಾಟರ್ !

Special

‘ವೀಳ್ಯದೆಲೆ’ಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು
ಕುಳಿತಲ್ಲೇ ‘ಕಾಲು’ ಅಲ್ಲಾಡಿಸುತ್ತೀರಾ…? ಜೋಕೆ….! ಇರಬಹುದು ಈ ಖಾಯಿಲೆ ಲಕ್ಷಣ
ಅತಿಯಾದ ಕಂಪ್ಯೂಟರ್ ಬಳಕೆಯಿಂದ ಕಣ್ಣು ನೋವೇ…..? ಇಲ್ಲಿವೆ ನಿವಾರಣೆಗೆ ನೈಸರ್ಗಿಕ ಚಿಕಿತ್ಸೆಗಳು….!

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?