SHOCKING : ಬೆಂಗಳೂರಿನಲ್ಲಿ ಹರ್ನಿಯಾ ಸರ್ಜರಿ ಮಾಡುವಾಗ ರೋಗಿ ಸಾವು, ಕುಟುಂಬಸ್ಥರ ಆರೋಪ.!

ಬೆಂಗಳೂರು : ಹರ್ನಿಯಾ ಆಪರೇಷನ್ ಗೆ ಹೋದವನು ಶವವಾಗಿ ವಾಪಸ್ ಆದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಶೇಷಾದ್ರಿಪುರಂನ ಮಾರುತಿ ನರ್ಸಿಂಗ್ ಹೋಂನಲ್ಲಿ ಈ ಘಟನೆ ನಡೆದಿದೆ. ರಂಗಸ್ವಾಮಿ (37) ಎಂಬುವವರು ಕಳೆದ ಶುಕ್ರವಾರ ಮಾರುತಿ ನರ್ಸಿಂಗ್ ಹೋಂಗೆ ದಾಖಲಾಗಿದ್ದರು. 40 ಸಾವಿರ ಹಣ ಕೊಡ ಕಟ್ಟಿದ್ದರು ಎನ್ನಲಾಗಿದೆ.ಭಾನುವಾರ ಆಪರೇಷನ್ ಮಾಡುತ್ತೇವೆ ಎಂದು ವೈದ್ಯರು ಹೇಳಿದ್ದರು. ಭಾನುವಾರ ಬೆಳಗ್ಗೆ 9 ಗಂಟೆಗೆ 2 ಇಂಜೆಕ್ಷನ್ ಕೊಟ್ಟಿದ್ದಾರೆ ಎಂದು ರಂಗಸ್ವಾಮಿ ಪತ್ನಿ ಸಂಗೀತಾ ಆರೋಪಿಸಿದ್ದಾರೆ.

ಹೆವಿಡೋಸ್ ಇಂಜೆಕ್ಷನ್ ಕೊಟ್ಟು ನನ್ನ ಪತಿಯನ್ನು ಸಾಯಿಸಿದ್ದಾರೆ. ಬಳಿಕ ನನ್ನ ಪತಿ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆಯವರು ಹೇಳಿದ್ದಾರೆ ಎಂದು ರಂಗಸ್ವಾಮಿ ಪತ್ನಿ ಸಂಗೀತಾ ಕಣ್ಣೀರಿಟ್ಟಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read