BREAKING: ಪ್ರಜ್ವಲ್ ವಿಡಿಯೋ ಪ್ರಕರಣಕ್ಕೆ HD ಕುಮಾರಸ್ವಾಮಿ ಹೊಸ ಟ್ವಿಸ್ಟ್

ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ವಿಡಿಯೋ ಪ್ರಕರಣಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ವಿಡಿಯೋ ಬಿಟ್ಟಿದ್ದು ಎನ್ನುತ್ತಾರೆ. ಈಗ ಕಾರ್ತಿಕ್ ಎಲ್ಲಿದ್ದಾನೆ? ಚಾಲಕ ಕಾರ್ತಿಕ್ ನನ್ನು ಮಲೇಷ್ಯಾಕ್ಕೆ ಕಳಿಸಿಕೊಟ್ಟವರು ಯಾರು? ನಿನ್ನೆ ಚಾಲಕ ವಿಡಿಯೋ ಬಿಡುಗಡೆ ಮಾಡಿದ್ದಾನಲ್ಲವೇ? ಆತ ಮಾತನಾಡಿರುವ ವಿಡಿಯೋ ಮಾಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.

ನಿನ್ನೆ ಅವನ ಕೈಯಲ್ಲಿ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಆತ ಏನು ಹೇಳಿಕೆ ಕೊಟ್ಟಿದ್ದಾನೆ? ತರಾತುರಿಯಲ್ಲಿ ಆತ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದು ಹೇಗೆ? ನನಗೂ ಎಲ್ಲಾ ಮಾಹಿತಿ ಇದೆ. ನನ್ನನ್ನು ಕೆಣಕಿದ್ದಾರೆ. ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ನಿನ್ನೆ ಚಾಲಕ ಕಾರ್ತಿಕ್ ವಿಡಿಯೋ ಮಾಡಿ ಹೇಳಿದ್ನಲ್ಲ, ಚಿಲ್ಲರೆ ಅಣ್ಣತಮ್ಮಂದಿರು ಏನು ಹೇಳಿದರು? ಹೆಚ್.ಡಿ. ಕುಮಾರಸ್ವಾಮಿಗೆ ಬಿಟ್ಟಿದ್ದು ಅಂತಾರೆ ಅಲ್ವಾ? ಚಾಲಕ ಕಾರ್ತಿಕ್ ಈಗ ಎಲ್ಲಿದ್ದಾನೆ? ಕಾರ್ತಿಕ್ ಮಲೇಷ್ಯಾದಲ್ಲಿ ಇದ್ದಾನೆ ಆತನನ್ನು ಕಳಿಸಿದವರು ಯಾರು? ನಮ್ಮನ್ನು ಕೆಣಕಿದವರ ಸುಲಭವಾಗಿ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read