BIG NEWS: ಕಾಂಗ್ರೆಸ್ ಶಾಸಕಾಂಗ ಸಭೆಗೆ ಹೋಗಿದ್ದು ನಿಜ ಎಂದ ಹೆಚ್.ವಿಶ್ವನಾಥ್

ಬೆಳಗಾವಿ: ಬೆಳಗಾವಿಯಲ್ಲಿ ನಿನ್ನೆ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೆ ನಾನು ಹೋಗಿದ್ದು ನಿಜ ಎಂದು ಬಿಜೆಪಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದ ಔತಣಕೂಟ, ಸಿಎಲ್ ಪಿ ಸಭೆಯಲ್ಲಿ ಬಿಜೆಪಿ ಶಾಸಕರು ಭಾಗವಹಿಸಿದ್ದರು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ನಾನು ಕಾಂಗ್ರೆಸ್ ಶಾಸಕಾಂಗ ಸಭೆಗೆ ಹೋಗಿದ್ದು ನಿಜ. ಡಿ.ಕೆ.ಶಿವಕುಮಾರ್ ಔತಣಕೂಟಕ್ಕೆ ಆಹ್ವಾನ ನೀಡಿದ್ದರು. ಆಹ್ವಾನ ಇದ್ದಿದ್ದು ಭೋಜನಕೂಟಕ್ಕೆ ಆದರೆ ಗೊತ್ತಾಗದೇ ಸಭೆಗೆ ಹೋಗಿದ್ದೆ ಎಂದರು.

ಔತಣಕೂಟ ಎಲ್ಲಿ ನಡೆಯುತ್ತಿದೆ ಅಂತಾ ನನಗೆ ಗೊತ್ತಿರಲಿಲ್ಲ. ನೇರವಾಗಿ ಸಿಎಲ್ ಪಿ ಸಭೆಯ ಹಾಲ್ ಗೆ ಹೊರಟು ಹೋದೆ. ಹಾಲ್ ಗೆ ಹೋಗುತ್ತಿದ್ದಂತೆ ಸಿಎಂ, ಡಿಸಿಎಂ ಬನ್ನಿ ಎಂದು ಕರೆದರು. ಅರ್ಧಗಂಟೆ ಸಭೆಯಲ್ಲಿದ್ದು ಬಳಿಕ ಭೋಜನ ಕೂಟಕ್ಕೆ ಹೊರಟು ಹೋದೆ ಎಂದು ಹೇಳಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read