H.D ಕುಮಾರಸ್ವಾಮಿ ಆರೋಪ ತೋಳ-ಬಂತು-ತೋಳ’ ದ ಕಥೆ ಹಾಗೆ : ಸಿಎಂ ಪರ ನಟ ಚೇತನ್ ಬ್ಯಾಟಿಂಗ್

ಬೆಂಗಳೂರು : ‘ಸಿಎಂ ಸಿದ್ದರಾಮಯ್ಯ’ರ ಪುತ್ರ ಯತೀಂದ್ರ ವೈರಲ್ ವಿಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದು, ಅಪ್ಪ- ಮಕ್ಕಳು ಕಲೆಕ್ಷನ್ ಕಿಂಗ್ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪರ ನಟ ಚೇತನ್ ಬ್ಯಾಟಿಂಗ್ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರರನ್ನು ‘ಕಲೆಕ್ಷನ್ ಕಿಂಗ್ಸ್’ ಎಂದು ಹೆಚ್ ಡಿ ಕುಮಾರಸ್ವಾಮಿ ಕರೆದಿದ್ದಾರೆಮಗ ಮತ್ತು ತಂದೆಯ ನಡುವಿನ ಫೋನ್ ಕರೆಯ ಸಂಭಾಷಣೆಯಲ್ಲಿ/ಸಂಭಾಷಣೆಯು ಯಾವುದೇ ಭ್ರಷ್ಟ ವ್ಯವಹಾರಗಳನ್ನು ಸೂಚಿಸುವುದಿಲ್ಲ.

ಪದೇ ಪದೇ ‘ತೋಳ-ಬಂತು-ತೋಳ’ ಎಂಬ ತಂತ್ರದಿಂದ ಕುಮಾರಸ್ವಾಮಿಯವರು ಜನರಲ್ಲಿ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಯಾವಾಗಲಾದರೂ ಒಂದು ವೇಳೆ ನಿಜವಾದ ತೋಳವು ಕಾಣಿಸಿಕೊಂಡರೆ ಕುಮಾರಸ್ವಾಮಿಯವರ ಮಾತನ್ನು ಗಂಭೀರವಾಗಿ ಯಾರು ಕೂಡ ಪರಿಗಣಿಸುವುದಿಲ್ಲಎಂದು ನಟ ಚೇತನ್ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read