SHOCKING: ಪತ್ನಿಯೊಂದಿಗೆ ನಿರಂತರವಾಗಿ ಫೋನ್ ನಲ್ಲಿ ಮಾತಾಡಿದ್ದಕ್ಕೆ ಎದೆಗೆ ಚಾಕು ಇರಿದು ಪ್ರಿಯಕರನ ಕೊಂದ ಮಹಿಳೆ

ಗುರುಗ್ರಾಮ: ಗುರುಗ್ರಾಮದ ಡಿಎಲ್‌ಎಫ್ ಹಂತ 3 ಪ್ರದೇಶದಲ್ಲಿ ಶನಿವಾರ 40 ವರ್ಷದ ಸ್ಕ್ರ್ಯಾಪ್ ವ್ಯಾಪಾರಿ ಹರೀಶ್ ಶರ್ಮಾ ಅವರನ್ನು ಅವರ ಲಿವ್-ಇನ್ ಪಾಲುದಾರಳಾದ ಯಶ್ಮೀತ್ ಕೌರ್ ಮಾರಣಾಂತಿಕವಾಗಿ ಇರಿದು ಕೊಲೆ ಮಾಡಿದ್ದಾಳೆ.

ಹರೀಶ್ ಶರ್ಮಾ ಅನಾರೋಗ್ಯ ಪೀಡಿತ ಪತ್ನಿಯೊಂದಿಗೆ ಫೋನ್ ನಲ್ಲಿ ನಿರಂತರ ಸಂವಹನ ನಡೆಸಿದ್ದರಿಂದ ಉಂಟಾದ ತೀವ್ರ ವಾಗ್ವಾದದ ನಂತರ ಈ ಘಟನೆ ಸಂಭವಿಸಿದೆ.

ಬಲಿಯಾವಾಸ್ ಗ್ರಾಮದ ನಿವಾಸಿ ಹರೀಶ್ ಶರ್ಮಾ, 27 ವರ್ಷದ ಯಶ್ಮೀತ್ ಕೌರ್ ಅವರೊಂದಿಗೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಡಿಗೆ ಫ್ಲಾಟ್‌ನಲ್ಲಿ ವಾಸಿಸುತ್ತಿದ್ದರು. ಹರೀಶ್ ತನ್ನ ಹೆಂಡತಿಯೊಂದಿಗೆ ವಾಸಿಸುತ್ತಿದ್ದ ಇಬ್ಬರು ಹೆಣ್ಣುಮಕ್ಕಳ ತಂದೆಯಾಗಿದ್ದಾರೆ. ಯಶ್ಮೀತ್ ಕೌರ್ ಜೊತೆಗೆ ವಾಸಿಸುತ್ತಿದ್ದರೂ ತನ್ನ ಹೆಂಡತಿಯ ಅನಾರೋಗ್ಯದ ಕಾರಣ ತನ್ನ ಕುಟುಂಬದೊಂದಿಗೆ ನಿಕಟ ಸಂಪರ್ಕ ಉಳಿಸಿಕೊಂಡಿದ್ದರು. ಈ ನಿರಂತರ ಸಂಪರ್ಕವು ಅವರ ಲಿವ್-ಇನ್ ಸಂಬಂಧದಲ್ಲಿ ವಿವಾದಕ್ಕೆ ಕಾರಣವಾಯಿತು.

ಶರ್ಮಾ ತಡರಾತ್ರಿ ತನ್ನ ಹೆಂಡತಿಯೊಂದಿಗೆ ಮಾತನಾಡುತ್ತಿರುವುದನ್ನು ಕಂಡ ಯಶ್ಮೀತ್ ಕೌರ್ ಜಗಳವಾಡಿದ್ದಾಳೆ. ಅದು ವಿಕೋಪಕ್ಕೆ ತಿರುಗಿ ಕೋಪಗೊಂಡ ಕೌರ್, ಶರ್ಮಾ ಅವರ ಎದೆಗೆ ಅಡಿಗೆ ಚಾಕುವಿನಿಂದ ಇರಿದಿದ್ದಾಳೆ. ಶರ್ಮಾರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.

ದೆಹಲಿಯ ಅಶೋಕ್ ನಗರದ ನಿವಾಸಿ ಕೌರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read