ಬೆಂಗಳೂರು: ಬೆಂಗಳೂರು ಜಲಮಂಡಳಿ ನೈರ್ಮಲ್ಯೀಕರಣ ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆಯಡಿ ಸ್ಮಾರ್ಟ್ಕಾರ್ಡ್ ವಿತರಣೆ ಮಾಡಲಾಗಿದೆ.
ಈ ಮೂಲಕ 700+ ನೈರ್ಮಲ್ಯೀಕರಣ ಕಾರ್ಮಿಕರಿಗೆ ಉಪಹಾರಕ್ಕಾಗಿ ಪ್ರತಿದಿನ ₹50 ರಂತೆ ಮಾಸಿಕ ₹1,500ನಷ್ಟು ಹಣವು ಸ್ಮಾರ್ಟ್ಕಾರ್ಡ್ ಮೂಲಕ ನೇರ ವರ್ಗಾವಣೆಯಾಗಲಿದೆ.
ಕಾರ್ಮಿಕರ ಕ್ಷೇಮಕ್ಕೆ ಪ್ರಥಮ ಆದ್ಯತೆ ನೀಡಿ ಜಲಮಂಡಳಿ ಸ್ವಚ್ಛತಾ ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆ ಜಾರಿಗೊಳಿಸಲಾಗಿದೆ.
ಬೆಂಗಳೂರು ಜಲಮಂಡಳಿ ನೈರ್ಮಲೀಕರಣ ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆಯಡಿ ಎಕ್ಸಿಸ್ ಬ್ಯಾಂಕ್ನ ಸಹಯೋಗದೊಂದಿಗೆ ಸ್ಮಾರ್ಟ್ ಕಾರ್ಡ್ಗಳ ವಿತರಿಸಲಾಗುವುದು. ಈ ಯೋಜನೆಗೆ ಅಂದಾಜು ಮಾಸಿಕ ₹10.50 ಲಕ್ಷ ಮತ್ತು ವಾರ್ಷಿಕ ₹1.26 ಕೋಟಿ ವೆಚ್ಚವಾಗಲಿದ್ದು, ಇದು ದೇಶದಲ್ಲಿಯೇ ಇಂತಹ ತಂತ್ರಜ್ಞಾನ ಆಧಾರಿತ ನೇರ ಹಣ ವರ್ಗಾವಣೆ ಮಾಡುವ ಮೊದಲ ಯೋಜನೆಯಾಗಿದೆ ಎನ್ನಲಾಗಿದೆ.