ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್: ಇಂದಿನಿಂದ ‘ಅನ್ನ ಸುವಿಧಾ ಯೋಜನೆ’ ಜಾರಿ: ಮನೆ ಬಾಗಿಲಿಗೆ ರೇಷನ್

ಅನ್ನ ಸುವಿಧಾ ಯೋಜನೆಯು ರಾಜ್ಯಾದ್ಯಂತ ನ. 01 ರಿಂದ ಅನುಷ್ಠಾನಗೊಳ್ಳಲಿದ್ದು, 75 ವಯಸ್ಸಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಅನ್ನ ಸುವಿಧಾ ಮಾಡ್ಯೂಲ್‌ನ ಮೂಲಕ ಅರ್ಹ ಫಲಾನುಭವಿಗಳ ಮನೆಯ ಬಾಗಿಲಿಗೆ ಪಡಿತರವನ್ನು ವಿತರಣೆ ಮಾಡಲಾಗುವುದು.

ಈ ಸಂಬಂಧ ಪ್ರತಿ ಮಾಹೆಯ ದಿನಾಂಕ 30 ಅಥವಾ 31 ನೇ ತಾರೀಖಿನಂದು ಗುರುತಿಸಲಾದ ಫಲಾನುಭವಿಗಳಿಗೆ SMS ಗಳನ್ನು ಕಳುಹಿಸಲಾಗುವುದು. ಅರ್ಹ ಫಲಾನುಭವಿಗಳು ಆಯಾ ತಿಂಗಳ ದಿನಾಂಕ 1 ರಿಂದ 5 ನೇ ತಾರೀಖಿನೊಳಗೆ ಅವರ ನ್ಯಾಯಬೆಲೆ ಅಂಗಡಿಯಲ್ಲಿ ಮನೆಯ ಬಾಗಿಲಿಗೆ ಪಡಿತರವನ್ನು ಪಡೆಯಲು ನೋಂದಾಯಿಸಿಕೊಳ್ಳತಕ್ಕದ್ದು.

ನೋಂದಾಯಿತ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಆಯಾ ತಿಂಗಳ 6 ರಿಂದ 15ನೇ ತಾರೀಖಿನೊಳಗಾಗಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಿಂದ ಪಡಿತರವನ್ನು ಪೂರೈಸಲಾಗುವುದು. ಅರ್ಹ ಫಲಾನುಭವಿಗಳು ಸದರಿ ಅನ್ನ ಸುವಿಧಾ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಹಾಸನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read