ಮದುವೆಗೆ ಹುಡುಗಿ ಸಿಕ್ತಿಲ್ಲ ಎಂದು ಬ್ರೋಕರ್ ಮಾತು ನಂಬಿದವನಿಗೆ ಬಿಗ್ ಶಾಕ್

ಬಾಗಲಕೋಟೆ: ಮದುವೆಗೆ ಹುಡುಗಿ ಸಿಕ್ಕಿಲ್ಲ ಎಂದ ಬ್ರೋಕರ್ ಮಾತು ನಂಬಿದ ವ್ಯಕ್ತಿಯೊಬ್ಬ ಮೋಸ ಹೋದ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲಿ ಪತ್ನಿ ಕೈಕೊಟ್ಟು ಹೋಗಿದ್ದಾಳೆ. ಮದುವೆ ಮಾಡಿಸಿಕೊಟ್ಟ ಬ್ರೋಕರ್ ವರನಿಂದ 4 ಲಕ್ಷ ರೂ. ಪಡೆದು ಪರಾರಿಯಾಗಿದ್ದಾನೆ.

ಬಾಗಲಕೋಟೆ ಜಿಲ್ಲೆ ಮುಧೋಳದ ಸೋಮಶೇಖರ್ ಮೋಸ ಹೋದ ವ್ಯಕ್ತಿ. ಈತನ ಮದುವೆಯಾಗಿದ್ದ ಶಿವಮೊಗ್ಗ ಮೂಲದ ಮಂಜುಳಾ ಸೇರಿದಂತೆ 7 ಮಂದಿ ವಿರುದ್ಧ ಮುಧೋಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮದುವೆಯಾಗಲು ಹುಡುಗಿಗಾಗಿ ಅಲೆದಾಡುತ್ತಿದ್ದ ಸೋಮಶೇಖರ್ ಗೆ ವಂಚಿಸಿದ ಬ್ರೋಕರ್ 4 ಲಕ್ಷ ರೂ. ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ.

ಜಮೀನು ಒತ್ತೆ ಇಟ್ಟು ಸೋಮಶೇಖರ್ ಅವರಿಗೆ ಹಣ ಕೊಟ್ಟಿದ್ದಾರೆ. ಮುಧೋಳದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಂಜುಳಾ ಜೊತೆಗೆ ಸೋಮಶೇಖರ್ ಮದುವೆಯಾಗಿದೆ. ಮದುವೆಯ ದಿನವೇ 7 ಜನರ ತಂಡ 4 ಲಕ್ಷ ರೂ. ಹಣ ಪಡೆದುಕೊಂಡಿದೆ.

ಮದುವೆಯಾದ ಒಂದು ತಿಂಗಳಲ್ಲಿ ಮಂಜುಳಾ ಪರಾರಿಯಾಗಿದ್ದಾಳೆ. ಆಕೆಯನ್ನು ವಿಚಾರಿಸಲು ಹೋದಾಗ ಈ ಮೊದಲೇ ಆಕೆಗೆ ಎರಡು ಮದುವೆಯಾಗಿರುವುದು ಗೊತ್ತಾಗಿದೆ. ಇದರಿಂದ ಬೇಸತ್ತ ಸೋಮಶೇಖರ್ ಹಣ ವಾಪಸ್ ಕೊಡುವಂತೆ ಬ್ರೋಕರ್ ಗಳಿಗೆ ಕೇಳಿಕೊಂಡಿದ್ದಾರೆ. ಆದರೆ ಅವರು ನಿರಾಕರಿಸಿದಾಗ ಮುಧೋಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read