BREAKING: ಭಾರತದ ಈ ನಡೆಗೆ ಬೆಚ್ಚಿಬಿದ್ದ ಪಾಕಿಸ್ತಾನ: ಝೀಲಂ ನದಿಗೆ ಭಾರೀ ನೀರು ಬಿಡುಗಡೆ, ದಿಢೀರ್ ಪ್ರವಾಹ ಸ್ಥಿತಿ

ಇಸ್ಲಾಮಾಬಾದ್: ಭಾರತದ ನಡೆಗೆ ಪಾಕಿಸ್ತಾನ ಕಂಗಾಲಾಗಿದೆ. ಪಾಕಿಸ್ತಾನದ ವಿರುದ್ಧ ಜಲಯುದ್ಧ ಸಾರಿರುವ ಭಾರತ ಅತಿ ಹೆಚ್ಚು ನೀರು ಬಿಟ್ಟು ಟಕ್ಕರ್ ಕೊಟ್ಟಿದೆ.

ಝೀಲಂ ನದಿಗೆ ಭಾರತದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡಲಾಗಿದ್ದು, ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಲಾಗಿದೆ. ಆಗ ಸಿಂಧೂ ನದಿಯ ನೀರನ್ನು ತಡೆಹಿಡಿಯಲಾಗಿತ್ತು. ಈಗ ಝೀಲಂ ನದಿಗೆ ಅತಿ ಹೆಚ್ಚು ನೀರನ್ನು ಭಾರತ ಬಿಟ್ಟು ಟಕ್ಕರ್ ಕೊಟ್ಟಿದೆ.

ಪಾಕ್ ಆಕ್ರಮಿತ ಕಾಶ್ಮೀರದ(ಪಿಒಕೆ) ಮುಜಫರಾಬಾದ್‌ನಾದ್ಯಂತ ಶನಿವಾರ ಮಧ್ಯಾಹ್ನ ಝೀಲಂ ನದಿಯಲ್ಲಿ ನೀರಿನ ಮಟ್ಟ ಹಠಾತ್ ಏರಿಕೆಯಾಗಿರುವುದರಿಂದ ಎಚ್ಚರಿಕೆಯನ್ನು ನೀಡಲಾಗಿದ್ದು, ಪಾಕಿಸ್ತಾನದ ಅಧಿಕಾರಿಗಳಿಗೆ ಯಾವುದೇ ಸೂಚನೆ ನೀಡದೆ ಭಾರತದಿಂದ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಚಕೋತಿ ಗಡಿಯಿಂದ ಮುಜಫರಾಬಾದ್‌ವರೆಗೆ ಝೀಲಂ ನದಿಯ ಉದ್ದಕ್ಕೂ ವಾಸಿಸುವ ಸ್ಥಳೀಯರು ನೀರಿನ ಮಟ್ಟದಲ್ಲಿ ತೀವ್ರ ಏರಿಕೆ ಕಂಡಿದ್ದು, ಪ್ರಚೋದಿತ ಪ್ರವಾಹದ ಭೀತಿ ಎದುರಿಸುತ್ತಿದ್ದಾರೆ. ಪೂರ್ವ ಸೂಚನೆಯಿಲ್ಲದೆ ನೀರನ್ನು ಬಿಡುಗಡೆ ಮಾಡುವುದು ಭಾರತದ ತಂತ್ರದ ಭಾಗವಾಗಿದೆ ಮತ್ತು ಈ ವಾರದ ಆರಂಭದಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಸಿಂಧೂ ಜಲ ಒಪ್ಪಂದವನ್ನು(ಐಡಬ್ಲ್ಯೂಟಿ) ಸ್ಥಗಿತಗೊಳಿಸುವ ಪ್ರಯತ್ನವಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಮುಜಫರಾಬಾದ್‌ನ ಸ್ಥಳೀಯ ಆಡಳಿತವು ಝೀಲಂ ನದಿಯ ಉದ್ದಕ್ಕೂ ನೀರಿನ ಮಟ್ಟದಲ್ಲಿ ಹಠಾತ್ ಹೆಚ್ಚಳವನ್ನು ದೃಢಪಡಿಸಿತು, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಟ್ಟಿಯಾನ್ ಬಾಲಾ ಪ್ರದೇಶದಲ್ಲಿ ನೀರಿನ ತುರ್ತುಸ್ಥಿತಿಯನ್ನು ಘೋಷಿಸಿತು.

ಹಟ್ಟಿಯಾನ್ ಬಾಲಾ, ಘರಿ ದುಪಟ್ಟಾ, ಮಜೋಯಿ ಮತ್ತು ಮುಜಫರಾಬಾದ್‌ನಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದನ್ನು ಸ್ಥಳೀಯರು ದೃಢಪಡಿಸಿದ್ದು, ಮಸೀದಿಗಳಲ್ಲಿ ಎಚ್ಚರಿಕೆಯ ಘೋಷಣೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ, ಝೀಲಂ ನದಿಯ ಉದ್ದಕ್ಕೂ ವಾಸಿಸುವ ಸ್ಥಳೀಯರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕರೆ ನೀಡಿದ್ದಾರೆ. ಎಚ್ಚರಿಕೆ ಪ್ರಕಟಣೆಗಳು ನದಿ ದಡದ ಬಳಿ ವಾಸಿಸುವ ನಿವಾಸಿಗಳಲ್ಲಿ ಭಯವನ್ನುಂಟುಮಾಡಿದೆ ಎಂದು ಘಾರಿ ದುಪಟ್ಟಾ ನಿವಾಸಿಯೊಬ್ಬರು ಹೇಳಿದ್ದಾರೆ.

ಭಾರತದ ಅನಂತನಾಗ್‌ನಿಂದ ಚಕೋತಿ ಪ್ರದೇಶದ ಮೂಲಕ ನೀರು ಪ್ರವೇಶಿಸಿದೆ.

ಪಾಕಿಸ್ತಾನಕ್ಕೆ ಮಾಹಿತಿ ನೀಡದೆ ಝೀಲಂ ನದಿಗೆ ನೀರು ಬಿಟ್ಟಿರುವ ಭಾರತದ ಕ್ರಮವು ಎರಡು ದೇಶಗಳ ನಡುವೆ ನಡೆಯುತ್ತಿರುವ ಉದ್ವಿಗ್ನತೆಯನ್ನು ಹೆಚ್ಚಿಸಬಹುದು ಎಂದು ತಜ್ಞರು ಹೇಳುತ್ತಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read