ಪಟಾಕಿ ಅಂಗಡಿಗೆ ಭಾರೀ ಬೆಂಕಿ: ಕೂಡಲೇ ಕಾಲಿಗೆ ಬುದ್ದಿ ಹೇಳಿ ಪಾರಾದ್ರು ಖರೀದಿಗೆ ಬಂದ ಜನ | ಭಯಾನಕ ದೃಶ್ಯ

ಹೈದರಾಬಾದ್‌ನ ಸುಲ್ತಾನ್ ಬಜಾರ್ ಪ್ರದೇಶದ ರೆಸ್ಟೋರೆಂಟ್‌ನಲ್ಲಿ ಭಾನುವಾರ ತಡರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಪಟಾಕಿ ಅಂಗಡಿಗೆ ವ್ಯಾಪಿಸಿ ಭಾರೀ ಬೆಂಕಿ ಹೊತ್ತಿಕೊಂಡಿದೆ. ಉರಿಯುತ್ತಿರುವ ಬೆಂಕಿಯಿಂದ ಅನೇಕ ವಾಹನಗಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಒಬ್ಬ ಮಹಿಳೆ ಗಾಯಗೊಂಡಿದ್ದಾರೆ.

ಘಟನೆ ನಡೆದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ರಾತ್ರಿ 10.45ರ ಸುಮಾರಿಗೆ ಬೆಂಕಿ ನಂದಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ಮಾತನಾಡಿದ ಸುಲ್ತಾನ್ ಬಜಾರ್ ಹೆಚ್ಚುವರಿ ಪೊಲೀಸ್ ಕಮಿಷನರ್(ಎಸಿಪಿ) ಕೆ. ಶಂಕರ್, ರೆಸ್ಟೋರೆಂಟ್‌ನಲ್ಲಿ ಈ ಘಟನೆ ಸಂಭವಿಸಿದೆ. ಹತ್ತಿರದ ಅಕ್ರಮ ಪಟಾಕಿ ಅಂಗಡಿಗೆ ಬೆಂಕಿ ವ್ಯಾಪಿಸಿದೆ ಎಂದು ತಿಳಿಸಿದ್ದಾರೆ.

ರಾತ್ರಿ 10.45 ರ ಸುಮಾರಿಗೆ ಬೆಂಕಿಯನ್ನು ನಂದಿಸಲಾಗಿದೆ. ರೆಸ್ಟೋರೆಂಟ್ ಸಂಪೂರ್ಣವಾಗಿ ಸುಟ್ಟುಹೋಗಿದೆ. 7-8 ಕಾರುಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ. ರೆಸ್ಟೋರೆಂಟ್‌ನಲ್ಲಿ ಸ್ಫೋಟಗೊಂಡ ಬೆಂಕಿಯು ಪಕ್ಕದ ಪಟಾಕಿ ಅಂಗಡಿಗೆ ಹರಡಿತು. ಅಂಗಡಿಗೆ ಯಾವುದೇ ಅನುಮತಿ ಪಡೆದಿಲ್ಲ. ಇದು ಅಕ್ರಮ ಅಂಗಡಿಯಾಗಿದೆ. ನಾವು ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.

ಸಂತ್ರಸ್ತ ಹಾಗೂ ಪ್ರತ್ಯಕ್ಷದರ್ಶಿ ಯಾದಗಿರಿ ಅವರು ತಮ್ಮ ಅನುಭವ ಹಂಚಿಕೊಂಡಿದ್ದು, ಅಂಗಡಿಗೆ ಬೆಂಕಿ ಹೊತ್ತಿಕೊಂಡಾಗ ಪಟಾಕಿ ಖರೀದಿಸಲು ಮಗನ ಜೊತೆ ಬಂದಿದ್ದೆ. ಒಳಗೆ ಕಿಡಿ ಕಂಡಾಗ ಹೊರಗೆ ಹಾರಿ, ಮಗ ಹಾಗೂ ಮತ್ತೊಬ್ಬ ಮಹಿಳೆಯನ್ನು ಹೊರಗೆ ಕಳಿಸಿ ಪರಾರಿಯಾಗಿದ್ದೇನೆ.. ಹೊರ ಬರುವಷ್ಟರಲ್ಲಿ ಭಾರೀ ಸ್ಪೋಟ ಅನಾಹುತ ಸಂಭವಿಸಿದೆ ಎಂದು ಹೇಳಿದ್ದಾರೆ.

https://twitter.com/RadheMundadaa/status/1850575947159990551

https://twitter.com/ANI/status/1850632230865096832

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read