BIG UPDATE : ಬೆಂಗಳೂರಿನ ಪಬ್ ನಲ್ಲಿ ಅಗ್ನಿ ಅವಘಡ : 4 ನೇ ಮಹಡಿಯಿಂದ ಜಿಗಿದಿದ್ದ ವ್ಯಕ್ತಿ ಸ್ಥಿತಿ ಗಂಭೀರ

ಬೆಂಗಳೂರು : ಬೆಂಗಳೂರಿನ ಪಬ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಪ್ರಾಣ ಉಳಿಸಿಕೊಳ್ಳಲು 4 ನೇ ಮಹಡಿಯಿಂದ ಜಿಗಿದಿದ್ದ ವ್ಯಕ್ತಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಪ್ರೇಮ್ ಕುಮಾರ್ ಎಂಬಾತ ಪ್ರಾಣ ಉಳಿಸಿಕೊಳ್ಳಲು ಪಬ್ ನ 4 ನೇ ಮಹಡಿಯಿಂದ ಜಿಗಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದನು. ನಂತರ ಆತನನ್ನು ಕೆಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಸ್ಥಿತಿ ಗಂಭೀರವಾದ ಹಿನ್ನೆಲೆ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪ್ರೇಮ್ ಕುಮಾರ್ ಈ ಪಬ್ ನಲ್ಲಿ ಸೀನಿಯರ್ ಶೆಫ್ ಆಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಕೋರಮಂಗಲದ ಮಡ್ ಪೈಪ್ ಹುಕ್ಕಾ ಕೆಫೆಯ ನಾಲ್ಕನೇ ಮಹಡಿಯಲ್ಲಿ ಈ ಅವಘಡ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಕ್ಷಣಾರ್ಧದಲ್ಲಿ ಇಡೀ ಕೆಫೆ ಆಹುತಿಯಾಗಿದೆ. ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ನಾಲ್ಕನೇ ಮಹಡಿಯ ಕೆಳಭಾಗಕ್ಕೂ ಬೆಂಕಿ ಆವರಿಸಿದ್ದು, ಐಷಾರಾಮಿ ಕಾರು,ಬೈಕ್ ಗಳು ಬೆಂಕಿಗಾಹುತಿಯಾಗಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read