BREAKING: ರಜೆ ಹಿನ್ನಲೆ ಪಿಕ್ನಿಕ್ ಗೆ ತೆರಳಿದ್ದ ತಂದೆ, ಮಗ ನೀರು ಪಾಲು

ದಾವಣಗೆರೆ: ಪ್ರವಾಸಕ್ಕೆ ತೆರಳಿಂದ ತಂದೆ, ಮಗ ಜಲಾಶಯದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ದೇವರಬೆಳಕೆರೆ ಜಲಾಶಯದಲ್ಲಿ ನಡೆದಿದೆ.

ಮಿಟ್ಲಕಟ್ಟೆ ಗ್ರಾಮದ ತಂದೆ ಚಂದ್ರು(42), ಪುತ್ರ ಶೌರ್ಯ(9) ಮೃತಪಟ್ಟವರು. ರಜೆ ಹಿನ್ನೆಲೆಯಲ್ಲಿ ಜಲಾಶಯ ನೋಡಲು ಇಬ್ಬರು ಮಕ್ಕಳ ಜೊತೆ ದಂಪತಿ ತೆರಳಿದ್ದರು. ಜಲಾಶಯದ ನೀರಿನಲ್ಲಿ ಇಬ್ಬರು ಪುತ್ರರು ಈಜುವಾಗ ನೀರಿನ ಸುಳಿಗೆ ಸಿಲುಕಿದ್ದಾರೆ. ಈ ವೇಳೆ ತಂದೆ ಓರ್ವ ಪುತ್ರನನ್ನು ರಕ್ಷಿಸಿದ್ದು, ಮತ್ತೊಬ್ಬ ಪುತ್ರನನ್ನು ರಕ್ಷಿಸಲು ಹೋಗಿ ನೀರಲ್ಲಿ ಮುಳುಗಿದ್ದಾರೆ. ಸ್ಥಳೀಯರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ಅಸ್ವಸ್ಥರಾಗಿ ಚಂದ್ರು ಸಾವನ್ನಪ್ಪಿದ್ದಾರೆ. ಶೌರ್ಯನಿಗಾಗಿ ಜಲಾಶಯದಲ್ಲಿ ಹುಡುಕಾಟ ನಡೆದಿದೆ. ಹರಿಹರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read