ಕೋಲಾರ: ಮಾವು ಬೆಳೆಗೆ ಬೆಲೆ ಕುಸಿತವಾಗಿರುವ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಕೋಲಾರ ರೈತರು, ಮಾವು ಬೆಳೆಗಾರರು ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿದ್ದಾರೆ. ಮಾವು ಬೆಳೆಗೆ ಬೆಂಬಲ ಬೆಲೆಗೆ ಒತ್ತಾಯಿಸಿ ರೈತರಿಂದ ಇಂದು ಶ್ರೀನಿವಾಸಪುರ ಬಂದ್ ಗೆ ಕರೆ ನೀಡಲಾಗಿದೆ.
ಹೌದು. ಮಾವಿಗೆ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಇಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ಬಂದ್ ಗೆ ಮಾವು ಬೆಳೆಗಾರರ ಸಂಘಟನೆ ನಿರ್ಧರಿಸಿದೆ. ಶ್ರೀನಿವಾಸಪುರದ ಮಾವು ಮಾರ್ಕೆಟ್ ನಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇಂದು ಶ್ರೀನಿವಾಸಪುರ ಬಂದ್ ಗೆ ತೀರ್ಮಾನಿಸಲಾಗಿದೆ. ಶ್ರೀನಿವಾಸಪುರ ಬಂದ್ ಗೆ ಪ್ರಾಂತ ರೈತ ಸಂಘಟನೆ, ಸೇರಿದಂತೆ ವಿವಿಧ ಸಂಘಟನೆಗಳು, ಬಿಜೆಪಿ-ಜೆಡಿಎಸ್ ಕೂಡ ಬೆಂಬಲಿಸಿದ್ದು, ಇಂದು ಶ್ರೀನಿವಾಸಪುರ ತಾಲೂಕು ಸಂಪೂರ್ಣ ಸ್ತಬ್ಧಗೊಳ್ಳಲಿದೆ.
You Might Also Like
TAGGED:ಶ್ರೀನಿವಾಸಪುರ ಬಂದ್