BIG NEWS : ಛತ್ತೀಸ್ಗಢದಲ್ಲಿ ಭದ್ರತಾ ಪಡೆಗಳ ಎನ್’ಕೌಂಟರ್   : ಪ್ರಮುಖ  ನಕ್ಸಲ್ ನಾಯಕ ಭಾಸ್ಕರ್ ಹತ್ಯೆ.!

ಬಿಜಾಪುರ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯ ನಡುವೆ ಭದ್ರತಾ ಪಡೆಗಳು ಶುಕ್ರವಾರ ಪ್ರಮುಖ ನಕ್ಸಲ್ ನಾಯಕ ಭಾಸ್ಕರ್ನನ್ನು ಕೊಂದಿವೆ ಎಂದು ಮೂಲಗಳು ತಿಳಿಸಿದೆ.

ವರದಿಯ ಪ್ರಕಾರ, ಭದ್ರತಾ ಪಡೆಗಳು ನಕ್ಸಲ್ ಭಾಸ್ಕರ್ ಅಲಿಯಾಸ್ ಮೈಲಾರಪು ಅಡೆಲ್ಲು ಅವರ ಮೃತ ದೇಹವನ್ನು ವಶಪಡಿಸಿಕೊಂಡಿವೆ. ಅವರ ದೇಹದ ಜೊತೆಗೆ, ಭದ್ರತಾ ಪಡೆಗಳು ಒಂದು ಎಕೆ -47 ರೈಫಲ್ ಮತ್ತು ಇತರ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಸಹ ವಶಪಡಿಸಿಕೊಂಡಿವೆ.
ಭಾಸ್ಕರ್ನ ಎನ್ಕೌಂಟರ್ ಬುಧವಾರದಿಂದ ರಾಜ್ಯ ಪೊಲೀಸರ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಮತ್ತು ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಹಾಗೂ ಸಿಆರ್ಪಿಎಫ್ನ ವಿಶೇಷ ಘಟಕ ಕೋಬ್ರಾದ ಸಿಬ್ಬಂದಿ ನಡೆಸುತ್ತಿರುವ ಅದೇ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಭಾಗವಾಗಿತ್ತು.

ಗುಂಡು ಹಾರಾಟ ನಿಂತ ನಂತರ, ಎನ್ಕೌಂಟರ್ ಸ್ಥಳದಿಂದ ನಕ್ಸಲೀಯನ ಮೃತದೇಹ, ಒಂದು ಎಕೆ -47 ರೈಫಲ್ ಮತ್ತು ಇತರ ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read