ಆನೆ ಬಾಲಕ್ಕೆ ಮಚ್ಚಿನೇಟಿನಿಂದ ಗಾಯ: ಇಬ್ಬರು ಕಾವಾಡಿಗಳು ಅಮಾನತು

ಶಿವಮೊಗ್ಗ: ಸಮೀಪದ ಸಕ್ರೆಬೈಲು ಆನೆ ಬಿಡಾರದಲ್ಲಿ ಭಾನುಮತಿ ಆನೆಯ ಬಾಲಕ್ಕೆ ಉಂಟಾಗಿದ್ದ ಗಾಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡಾರದ ಇಬ್ಬರು ಕಾವಾಡಿಗಳನ್ನು ಅಮಾನತು ಮಾಡಲಾಗಿದೆ.

ಭಾನುಮತಿ ಆನೆ ತುಂಬು ಗರ್ಭಿಣಿಯಾಗಿದ್ದಾಗ ಅಕ್ಟೋಬರ್ 17ರಂದು ಅದರ ಬಾಲಕ್ಕೆ ಮಚ್ಚಿನಿಂದ ಹೊಡೆದ ರೀತಿ ಗಾಯವಾಗಿತ್ತು. ಬಾಲ ಅರ್ಧ ತುಂಡಾಗಿ ಜೋತಾಡುತ್ತಿತ್ತು. ತೀವ್ರ ಗಾಯವಾಗಿದ್ದು, ಶಸ್ತ್ರಚಿಕಿತ್ಸೆ ಬಳಿಕ ಆನೆ ಚೇತರಿಸಿಕೊಂಡಿತು.

ಆದರೆ, ಆನೆ ಬಾಲಕ್ಕೆ ಗಾಯವನ್ನುಂಟು ಮಾಡಿದವರು ಯಾರು ಮತ್ತು ಏಕೆ ಬಾಲ ಕತ್ತರಿಸುವ ಪ್ರಯತ್ನ ಮಾಡಿದ್ದರು ಎಂಬುದರ ಬಗ್ಗೆ ಮಾಹಿತಿ ಗೊತ್ತಾಗಿಲ್ಲ. ಆನೆ ನೋಡಿಕೊಳ್ಳುತ್ತಿದ್ದ ಕಾವಾಡಿಗಳಾದ ಸುದೀಪ್ ಮತ್ತು ಮಹಮ್ಮದ್ ಅವರನ್ನು ಕರ್ತವ್ಯ ನಿರ್ಲಕ್ಷ ಕಾರಣ ಅಮಾನತು ಮಾಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read