ಈ ರೀತಿ ಹೇಳಿಕೆಗಳನ್ನು ಸಮರ್ಥನೆ ಮಾಡಲು ಸಾಧ್ಯವಿಲ್ಲ; ಮಾತನಾಡುವಾಗ ಸರಿಯಾಗಿ ಮಾತನಡಬೇಕು; ಮಾಜಿ ಸ್ಪೀಕರ್ ಹೇಳಿಕೆಗೆ ಗರಂ ಆದ ಗೃಹ ಸಚಿವ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರನ್ನು ಶನಿ ಎಂದು ಕರೆದಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಸಾರ್ವಜನಿಕ ವಲಯದಲ್ಲಿರುವಾಗ ಸರಿಯಾಗಿ ಮಾತನಾಡಬೇಕು. ಯಾವುದೇ ಪಕ್ಷದವರಾಗಲಿ ಮಾತನಾಡುವಾಗ ಎಚ್ಚರದಿಂದ ಮಾತನಡಬೇಕು.

ಇಂತಹ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಆಗಲ್ಲ. ಯಾವುದೇ ಹೇಳಿಕೆ ನೀಡಿದರು ಜನ ನಮ್ಮನ್ನು ಅಳೆಯುತ್ತಾರೆ. ನಾನು ಹೇಳಿಕೆ ಕೊಟ್ರೆ ಅದರ ಮೇಲೆ ಜನ ನನ್ನನ್ನು ಅಳೆಯುತ್ತಾರೆ. ಜೊತೆಗೆ ತಿರುಚಿವಂತ ಕೆಲಸ ಕೂಡ ಆಗುತ್ತೆ. ಹಾಗಾಗಿ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯರಿತು ಮಾತನಾಡಬೇಕು ಎಂದು ಹೇಳಿದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read