ಹಾಸನ: ಜಿಲ್ಲಾಧಿಕಾರಿ ಕೆ.ಎಸ್. ಲತಾ ಕುಮಾರಿ ಅವರು ಜು.31 ರಂದು ಬೆ.9 ರಿಂದ 10 ಗಂಟೆಯವರೆಗೆ ಹಾಸನ ಆಕಾಶವಾಣಿಯಲ್ಲಿ ಹಾಸನ ನಗರ ಮತ್ತು ಜಿಲ್ಲೆಯ ಇತರೆ ಪಟ್ಟಣ ಮತ್ತು ನಗರಗಳ ಸ್ವಚ್ಛತೆ ಮತ್ತು ನಾಗರೀಕ ಸಮಸ್ಯೆಗಳ ಕುರಿತು ನೇರ ಫೋನ್-ಇನ್ ಕಾರ್ಯಕ್ರಮ ನಡೆಸಲಿದ್ದಾರೆ.
ಸಾರ್ವಜನಿಕರು ಜಿಲ್ಲಾಧಿಕಾರಿಗಳೊಂದಿಗೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಲು ದೂರವಾಣಿ ಸಂಖ್ಯೆ 08172-246289, 08172-245258 ಸಂಪರ್ಕಿಸಿ ಇದರ ಸದುಪಯೋಗ ಪಡೆಯಬಹುದಾಗಿದೆ.