ಜಗತ್ತಿನಲ್ಲಿ ರೋಗ ಹೆಚ್ಚಳ, ಭವಿಷ್ಯದಲ್ಲಿ ಕೆಟ್ಟ ದಿನಗಳೇ ಜಾಸ್ತಿ: ಕೋಡಿಮಠ ಸ್ವಾಮೀಜಿ ಶಾಕಿಂಗ್ ಭವಿಷ್ಯ

ಬೆಳಗಾವಿ: ಜಗತ್ತಿನಲ್ಲಿ ರೋಗಗಳು ಹೆಚ್ಚಾಗುತ್ತವೆ. ಭವಿಷ್ಯದಲ್ಲಿ ಕೆಟ್ಟ ದಿನಗಳು ಜಾಸ್ತಿಯಾಗುತ್ತವೆ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಬೆಳಗಾವಿಯ ರಾಮತೀರ್ಥನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ಜಗತ್ತಿನಲ್ಲಿ ರೋಗ ಹೆಚ್ಚಾಗಲಿದ್ದು, ಜನರು ಆಯಸ್ಸು, ಮಾನಸಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಮುಂದಿನ ದಿನಗಳು ಶುಭವಿಲ್ಲ, ಒಳ್ಳೆಯ ದಿನಗಳು ಇವೆ. ಆದರೆ, ಕೆಟ್ಟ ದಿನಗಳು ಜಾಸ್ತಿ ಎಂದು ಹೇಳಿದ್ದಾರೆ.

ಬರುವ ದಿನಗಳಲ್ಲಿ ಒಳ್ಳೆಯ ದಿನಗಳು ಇವೆ. ವಿಶೇಷವಾಗಿ ಕಪ್ಪು ಬೆಳಕಿನಲ್ಲಿ ಕಪ್ಪು ಹೆಚ್ಚಾಗಿದೆ ಎಂದ ಅವರು, ರಾಜ್ಯದಲ್ಲಿ ಭೀಕರ ಮಳೆಯಾಗುತ್ತದೆ. ಗುಡ್ಡ ಕುಸಿತವಾಗುತ್ತದೆ, ಸಾವು ನೋವು ಸಂಭವಿಸುತ್ತದೆ ಎಂದು ಈ ಹಿಂದೆ ಹೇಳಿದ್ದೆ. ಇದು ಅಮಾವಾಸ್ಯೆಯವರೆಗೂ ಇರುತ್ತದೆ. ಪ್ರಕೃತಿಯಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇದೆ. ಅದು ಪ್ರಕೃತಿಯ ದೋಷ. ಆದರೆ ಈಗ ಒಳ್ಳೆಯದಕ್ಕಿಂತ ಕೆಟ್ಟದ್ದೇ ಹೆಚ್ಚಾಗುತ್ತದೆ. ಅನಿಷ್ಟ ಜಾಸ್ತಿ ಇರುತ್ತದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read