ನಿರ್ದೇಶಕ ಸೂರ್ಯ ವಿರುದ್ಧ ನಟಿ ಅಮೂಲ್ಯ ಗೌಡ ದೂರು ದಾಖಲು

ಬೆಂಗಳೂರು: ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ಅಶ್ಲೀಲ ಸಂದೇಶ ರವಾನಿಸಿ, ಕರೆ ಮಾಡಿ ಕಿರುಕುಳ ನೀಡುತ್ತಿರುವ ಆರೋಪ ನಿರ್ದೇಶಕ ಸೂರ್ಯ ವಿರುದ್ಧ ಕೇಳಿಬಂದಿದೆ.

ನಟಿ ಅಮೂಲ್ಯ ಗೌಡ ನಿರ್ದೇಶಕ ಸೂರ್ಯ ವಿರುದ್ಧ ಆರ್.ಆರ್.ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ನಿರ್ದೇಶಕ ಸೂರ್ಯ  ಆಡಿಷನ್ ಗೆ ಕರೆಯುವ ನೆಪದಲ್ಲಿ ವಾಟ್ಸಾಪ್ ಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ. ಅಲ್ಲದೇ ಕರೆ ಮಾಡಿ ಕಿರುಕುಳ ನೀಡಿದ್ದಾರೆ. ಇದನ್ನು ಪ್ರಶಿಸಿದ್ದಕ್ಕೆ ಆವಾಜ್ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಸಂಬಂಧ ಏಪ್ರಿಲ್ 30ರಂದು ನಟಿ ಅಮೂಲ್ಯ ಗೌಡ ಆರ್.ಆರ್,ನಗರ ಠಾಣೆಯಲ್ಲಿ ನಿರ್ದೇಶಕ ಸೂರ್ಯ ವಿರುದ್ಧ ದೂರು ದಾಖಲಿಸಿದ್ದು, ಇಂದು ನಿರ್ದೇಶಕ ಸೂರ್ಯನನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read