ಗ್ರಾಮ ದೇವತೆ ಜಾತ್ರೆಗೆ ತಂದಿದ್ದ ಕೋಣ ತಿವಿದು ವ್ಯಕ್ತಿ ಸಾವು

ಚಿತ್ರದುರ್ಗ: ಚಿತ್ರದುರ್ಗ ತಾಲೂಕಿನ ಮದಕರಿಪುರ ಗ್ರಾಮದಲ್ಲಿ ಜಾತ್ರೆಗೆ ತಂದಿದ್ದ ದೇವರ ಕೋಣ ತಿವಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.

ಮದಕರಿಪುರ ಗ್ರಾಮದ ಕೊಲ್ಲೂರಪ್ಪ(65) ಮೃತಪಟ್ಟವರು. ಗ್ರಾಮ ದೇವತೆ ಕೊಲ್ಲಾಪುರದಮ್ಮ ಜಾತ್ರೆ ನಡೆಯುತ್ತಿದ್ದು, ಸಂಪ್ರದಾಯದಂತೆ ಬುಧವಾರ ಬೆಳಗಿನ ಜಾವ ದೇವಾಲಯದ ಸಮೀಪ ಕಟ್ಟಲು ಕೊಲ್ಲೂರಪ್ಪ ಕೋಣ ಹಿಡಿದುಕೊಂಡು ಬರುವಾಗ ಅವರ ತೊಡೆಯ ಭಾಗಕ್ಕೆ ತಿವಿದಿದೆ.

ಕೋಣದ ತಿವಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಕೊಲ್ಲೂರಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read