ಶಿರೂರು ಬಳಿ ಗುಡ್ಡ ಕುಸಿತ ಪ್ರಕರಣ: ಮತ್ತೊಂದು ಮೃತ ದೇಹ ಹೊರಕ್ಕೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಶಿರೂರು ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಡಿ.ಆರ್.ಎಫ್. ಸಿಬ್ಬಂದಿ ಮತ್ತೊಂದು ಮೃತ ದೇಹ ಪತ್ತೆ ಹಚ್ಚಿದ್ದಾರೆ.

ಇದುವರೆಗೆ ಐದು ಜನರ ಮೃತ ದೇಹಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದಿದ್ದಾರೆ. ಎಸ್.ಡಿ.ಆರ್.ಎಫ್. ಹಾಗೂ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಹೋಟೆಲ್ ಮಾಲೀಕ ಲಕ್ಷ್ಮಣ ನಾಯಕ, ಅವರ ಪತ್ನಿ ಶಾಂತಿ, ಪುತ್ರ ರೋಷನ್ ಹಾಗೂ ಟ್ರಕ್ ಚಾಲಕನ ಶವ ನಿನ್ನೆ ಪತ್ತೆಯಾಗಿತ್ತು.

ಗೋಕರ್ಣ ಬಳಿ ನಿನ್ನೆ ನಾಲ್ವರ ಮೃತ ದೇಹಗಳು ಪತ್ತೆಯಾಗಿದ್ದವು. ಇಂದು ಮತ್ತೊಂದು ಮೃತ ದೇಹ ನದಿಯಿಂದ ಹೊರತೆಗೆಯಲಾಗಿದೆ. ಉಳಿದವರ ಮೃತ ದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read