ನಟ ದರ್ಶನ್ ಗೆ ವಕೀಲರಿಂದ ಪತ್ರ

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಹೆಸರಿಗೆ ಭಾನುವಾರ ವಕೀಲರೊಬ್ಬರಿಂದ ಪ್ರಕರಣದ ಕುರಿತ ಪತ್ರ ಬಂದಿದೆ ಎನ್ನಲಾಗಿದೆ.

ಬಳ್ಳಾರಿ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಹೆಸರಿಗೆ ವಕೀಲರೊಬ್ಬರಿಂದ ಪತ್ರ ಬಂದಿದ್ದು ಅದರಲ್ಲಿನ ಮಾಹಿತಿ ಬಹಿರಂಗವಾಗಿಲ್ಲ. ಹೈ ಸೆಕ್ಯೂರಿಟಿ ಸೆಲ್ ನಲ್ಲಿ ಬಂಧಿಯಾಗಿರುವ ದರ್ಶನ್ ನಿತ್ಯ ಕಾಲ ಕಳೆಯಲು ಪುಸ್ತಕಗಳೇ ಆಸರೆಯಾಗಿವೆ.

ಜೈಲು ಅಧಿಕಾರಿಗಳಿಗೆ ಟಿವಿಗಾಗಿ ದರ್ಶನ್ ಮನವಿ ಮಾಡಿದ್ದು, ದುರಸ್ತಿ ಹಿನ್ನೆಲೆ ಒಂದೆರಡು ದಿನಗಳಲ್ಲಿ ಟಿವಿ ಅಳವಡಿಸಲಾಗುವುದು. ಇತ್ತೀಚೆಗಷ್ಟೇ ದರ್ಶನ್ ಅವರ ಪತ್ನಿ ಮತ್ತು ವಕೀಲರು ಜೈಲಿಗೆ ಭೇಟಿ ನೀಡಿ ಪ್ರಕರಣದ ಕುರಿತಾಗಿ ಚರ್ಚೆ ನಡೆಸಿದ್ದರು.

ಇನ್ನು ಅಪರಿಚಿತ ವ್ಯಕ್ತಿಯೊಬ್ಬ ಜೈಲಿನಲ್ಲಿರುವ ದರ್ಶನ್ ಹೆಸರಿಗೆ ಹನುಮನಾಮ ಮತ್ತು ಕಥೆ ಪುಸ್ತಕಗಳನ್ನು ಪಾರ್ಸೆಲ್ ಕಳುಹಿಸಿದ್ದಾರೆ. ಸರ್ವ ಸಂಕಷ್ಟಕ್ಕೆ ಹನುಮಂತನೇ ಪರಿಹಾರ. ಹನುಮಂತನ ಆಶೀರ್ವಾದ ನಿಮ್ಮ ಮೇಲಿದ್ದು, ಈ ಪುಸ್ತಕಗಳನ್ನು ಓದಿರಿ, ನಿಮಗೆ ಒಳ್ಳೆಯದಾಗುತ್ತದೆ ಎಂದು ಬರೆಯಲಾಗಿದೆ. ಪಾರ್ಸೆಲ್ ಅನ್ನು ಜೈಲಿನ ಸಿಬ್ಬಂದಿ ಪರಿಶೀಲಿಸಿದ ಬಳಿಕ ದರ್ಶನ್ ಗೆ ನೀಡಿದ್ದಾರೆ ಎನ್ನಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read