ಬಿಜೆಪಿಗೆ ‘ತಾರಾ ಬಲ’: ಕಿಚ್ಚ ಸುದೀಪ್ ಬೆನ್ನಲ್ಲೇ ನಟ ದರ್ಶನ್ ಭರ್ಜರಿ ಪ್ರಚಾರ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಕಿಚ್ಚ ಸುದೀಪ್ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಇಂದಿನಿಂದ ಪ್ರಚಾರ ಕೈಗೊಂಡಿದ್ದಾರೆ.

ಬೆಳಗ್ಗೆ 9:30ಕ್ಕೆ ಕೆಜಿಎಫ್, 10.30 ಕ್ಕೆ ಬಂಗಾರಪೇಟೆ, 11:30ಕ್ಕೆ ಕೋಲಾರದಲ್ಲಿ ದರ್ಶನ್ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 2:30ಕ್ಕೆ ಮಾಲೂರು, 3:30ಕ್ಕೆ ಹೊಸಕೋಟೆ, ಸಂಜೆ 4.30ಕ್ಕೆ ವಿಜಯಪುರ, 5:30ಕ್ಕೆ ದೇವನಹಳ್ಳಿ, 6.30ಕ್ಕೆ ದೊಡ್ಡಬಳ್ಳಾಪುರ, ಮತ್ತು 7:30ಕ್ಕೆ ನೆಲಮಂಗಲದಲ್ಲಿ ದರ್ಶನ್ ಭರ್ಜರಿ ಪ್ರಚಾರ ನಡೆಸಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ.

ಸುದೀಪ್ ಕಳೆದ ಮೂರು ದಿನಗಳಿಂದ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದು, ನಟ ಶಿವರಾಜ್ ಕುಮಾರ್ ನಾಳೆಯಿಂದ ಸೊರಬ, ಶಿರಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವರು, ದರ್ಶನ್ ಇಂದಿನಿಂದ ಕೋಲಾರ ಸೇರಿದಂತೆ ವಿವಿಧ ಕಡೆ ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read