ಬೆಂಗಳೂರು: ಪಾಪ ಕುಮಾರಸ್ವಾಮಿ ಅವರನ್ನು ನಾನು ಗಮನಿಸುತ್ತಿದ್ದೇನೆ. ಅವರು ತಮ್ಮ ಖುಷಿಗಾಗಿ ಏನೂ ಬೇಕಾದರೂ ಹೇಳಿಕೊಳ್ಳಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ನನಗೆ ಮೊದಲು ಕುಮರಸ್ವಾಮಿಯವರ ಆರೋಗ್ಯ ಸುಧಾರಣೆಯಾಗಬೇಕು. ನನಗೆ ಬೈಯ್ಯುವುದರಿಂದ, ನನ್ನ ವಿರುದ್ಧ ಆರೋಪ ಮಾಡುವುದರಿಂದ ಅವರಿಗೆ ಒಳ್ಳೆಯದಾಗುತ್ತದೆ ಎನ್ನುವುದಾದರೆ ಅವರು ಆರೋಪ ಮಾಡಲಿ ಎಂದಿದ್ದಾರೆ.
ಪಾಪ ಅವರ ಖುಷಿಗಾಗಿ ಏನು ಬೇಕಾದರೂ ಮಾತನಾಡಲಿ, ಅದರಿಂದ ಅವರ ಆರೋಗ್ಯ ಸುಧಾರಿಸಲಿ ಎಂದು ಲೇವಡಿ ಮಾಡಿದ್ದಾರೆ.