ಡಿ ಬಾಸ್ ಎಂದು ಕೂಗಬೇಡಿ ಎಂದಿದ್ದಕ್ಕೆ ವ್ಯಕ್ತಿಗೆ ಚಾಕು ಇರಿತ

ರಾಮನಗರ: ಡಿ ಬಾಸ್ ಎಂದು ಕೂಗಬೇಡಿ ಎಂದು ಹೇಳಿದ ವ್ಯಕ್ತಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಸೂಲಿಕೆರೆಪಾಳ್ಯ ಲೇಬರ್ ಶೆಡ್ ನಲ್ಲಿ ನಡೆದಿದೆ.

ದರ್ಶನ್ ಅಭಿಮಾನಿಗಳಿಬ್ಬರು ತಮಗೆ ಕೆಲಸ ಕೊಟ್ಟಿದ್ದ ಮೇಸ್ತ್ರಿಯ ಕುತ್ತಿಗೆಗೆ ಇರಿದು ಗಾಯಗೊಳಿಸಿದ್ದಾರೆ. ದೊಡ್ಡಮಣ್ಣುಗುಡ್ಡೆ ಗ್ರಾಮದ ನಿವಾಸಿ ವೆಂಕಟಸ್ವಾಮಿ ಇರಿತಕ್ಕೆ ಒಳಗಾದ ಮೇಸ್ತ್ರಿ. ಐಜೂರು ಬಡಾವಣೆ ನಿವಾಸಿಗಳಾದ ಕಿರಣ್ ಮತ್ತು ಮಹಾದೇವ ಕೃತ್ಯವೆಸಗಿದ್ದಾರೆ.

ಸೆಪ್ಟೆಂಬರ್ 26ರಂದು ರಾತ್ರಿ ಶೆಡ್ ನಲ್ಲಿ ಆರೋಪಿಗಳು ಮದ್ಯಾಪನ ಮಾಡಿ ಡಿ ಬಾಸ್ ಡಿ ಬಾಸ್ ಎಂದು ಕೂಗಾಡಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮೇಸ್ತ್ರಿ ವೆಂಕಟಸ್ವಾಮಿ ಕುತ್ತಿಗೆಗೆ ಇರಿದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read