ಬೆಂಗಳೂರು : ಬೆಂಗಳೂರಿನಲ್ಲಿ ನಾಳೆ ನಿಗದಿಯಾಗಿದ್ದ ಕಾಂಗ್ರೆಸ್ ಪ್ರತಿಭಟನೆ ಮುಂದೂಡಿಕೆಯಾಗಿದ್ದು, ಅದೇ ರೀತಿ ಬಿಜೆಪಿ ಪ್ರತಿಭಟನೆ ಕೂಡ ಮುಂದೂಡಿಕೆಯಾಗಿದೆ .ಕಾಂಗ್ರೆಸ್ ಪ್ರತಿಭಟನೆ ಮುಂದೂಡಿದ ಹಿನ್ನೆಲೆ ಬಿಜೆಪಿ ಕೂಡ ಪ್ರತಿಭಟನೆ ಮುಂದೂಡಿದೆ. ವಿಧಾನಸೌಧದ ಆವರಣದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು.
ಜಾರ್ಖಂಡ್ನ ಮಾಜಿ ಸಿಎಂ ಶಿಬು ಸೊರೆನ್ ಅವರ ನಿಧನದ ನಂತರ ಆಗಸ್ಟ್ 5 ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿಯನ್ನು ಆಗಸ್ಟ್ 8 ಕ್ಕೆ ಮುಂದೂಡಲಾಗಿದೆ.
ಬೆಂಗಳೂರಿನಲ್ಲಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ , “ನಾಳೆ ಅಂತ್ಯಕ್ರಿಯೆ ಇದೆ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಲು ನಾಳೆ ಜಾರ್ಖಂಡ್ಗೆ ಹೋಗಲಿದ್ದಾರೆ. ಇದರ ಹಿನ್ನೆಲೆಯಲ್ಲಿ, ಕಾರ್ಯಕ್ರಮವು ಮುಂದೂಡಲಾಗಿದೆ. ಆಗಸ್ಟ್ 8, 2025 ಕ್ಕೆ ಮುಂದೂಡಲ್ಪಡುತ್ತದೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ಮುಂದೂಡಿದ ಹಿನ್ನೆಲೆ ಬಿಜೆಪಿ ಕೂಡ ವಿಧಾನಸೌಧದ ಮುಂದೆ ನಡೆಸಲು ನಿರ್ಧರಿಸಿದ್ದ ಪ್ರತಿಭಟನೆಯನ್ನು ಮುಂದೂಡಿದೆ ಎಂದು ತಿಳಿದು ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ತೀವ್ರ ಆರೋಪ ಮಾಡಿದ್ದಾರೆ. ಈ ಸಂಬಂಧ ರಾಹುಲ್ ಗಾಂಧಿ ನೇತೃತ್ವದಲ್ಲಿ ಆ.5 ರಂದು ನಾಳೆ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ಹಮ್ಮಿಕೊಂಡಿದ್ದರು.
Congress protest rally, scheduled to be held in Bengaluru on August 5, deferred to August 8 following the demise of former Jharkhand CM and JMM founder patron Shibu Soren.
— ANI (@ANI) August 4, 2025
In Bengaluru, Congress general secretary and MP Randeep Singh Surjewala says, "Tomorrow is the cremation.… pic.twitter.com/KQTHiH7Jhq
#WATCH | Bengaluru, Karnataka: Congress general secretary and MP Randeep Singh Surjewala says, "Former CM, leader of the JMM, Shibu Soren, expired this morning. CM Hemant Soren has also informed about the demise of Shibu Soren. On behalf of KPCC and AICC, I extend my heartfelt… pic.twitter.com/OPL1NnORt2
— ANI (@ANI) August 4, 2025