́ಗಣರಾಜ್ಯೋತ್ಸವʼ ಸಂದರ್ಭದಲ್ಲಿ ಕುಸಿದು ಬಿದ್ದ ಪೊಲೀಸ್ ಆಯುಕ್ತ | Video

ತಿರುವನಂತಪುರಂ: ತಿರುವನಂತಪುರಂ ಕೇಂದ್ರ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ವೇಳೆ ನಗರ ಪೊಲೀಸ್ ಆಯುಕ್ತರಾದ ಥಾಮಸ್ ಜೋಸ್ ಕುಸಿದು ಬಿದ್ದಿದ್ದಾರೆ. ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಪರೇಡ್‌ಗೆ ಭಾಷಣ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಗವರ್ನರ್ ಬಳಿ ನಿಂತಿದ್ದ ಆಯುಕ್ತರು, ವಿವಿಧ ಸಶಸ್ತ್ರ ಪಡೆಗಳಿಂದ ಸಲಾಮು ಸ್ವೀಕರಿಸಿದ ನಂತರ ಗವರ್ನರ್ ತಮ್ಮ ಭಾಷಣವನ್ನು ಪ್ರಾರಂಭಿಸಿದಾಗ ಕುಸಿದು ಬಿದ್ದರು.

ಅವರು ಮುಂದಕ್ಕೆ ಬಿದ್ದಿದ್ದು, ಕೂಡಲೇ ಅವರ ಸಹೋದ್ಯೋಗಿಗಳು ಅವರನ್ನು ಆ್ಯಂಬುಲೆನ್ಸ್‌ಗೆ ಸ್ಥಳಾಂತರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆದ ನಂತರ ಥಾಮಸ್ ಜೋಸ್ ಮರಳಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read