ಪೋಷಕರೇ ಗಮನಿಸಿ…! ಆಟವಾಡುತ್ತಾ ಕೈಗೆ ಸಿಕ್ಕ ಉಂಗುರ ನುಂಗಿದ ಮಗು ಸಾವು

ಮಡಿಕೇರಿ: ಆಟವಾಡುವ ವೇಳೆ ಕೈಗೆ ಸಿಕ್ಕ ಉಂಗುರ ನುಂಗಿದ ಮಗು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

ಮುನೀರ್ ಎಂಬುವವರ 8 ತಿಂಗಳ ಮಗು ಮೃತಪಟ್ಟಿದೆ. ಬುಧವಾರ ರಾತ್ರಿ ಮನೆಯಲ್ಲಿ ಮಗು ಆಟವಾಡುವ ವೇಳೆ ಕೈಗೆ ಸಿಕ್ಕ ಉಂಗುರ ನುಂಗಿದೆ. ಕೂಡಲೇ ಮಗುವನ್ನು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕೊಡಗು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯರು ಕೂಡಲೇ ಕ್ರಮ ಕೈಗೊಂಡು ಶಸ್ತ್ರಚಿಕಿತ್ಸೆ ನಡೆಸಿ ಉಂಗುರ ಹೊರ ತೆಗೆದಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read