ಚಿಕ್ಕಮಗಳೂರು: ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿಯೂ ಹೃದಯಾಘಾತದಿಂಸ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. 29 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಹರೀಶ್ (29) ಮೃತ ಯುವಕ. ತರೀಕೆರೆ ತಾಲೂಕಿನ ಶಿವಾನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುವಕ ಹರೀಶ್ ಗೆ ನಿನ್ನೆ ಬೆಳಿಗ್ಗೆ ವಾಂತಿಯಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಎಂದು ಮಾತ್ರೆ ನುಂಗಿ ಮಲಗಿದ್ದರು. ಈ ವೇಳೆ ಮತ್ತೆ ವಾಂತಿ ಶುರುವಾಗಿದೆ. ವಾಂತಿ ಮಾಡಿಕೊಂಡ ಯುವಕ ಕುಸಿದುಬಿದ್ದಿದ್ದಾರೆ. ಕುಟುಂಬದವರು ತಕ್ಷಣ ಅಜ್ಜಂಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆಯೇ ಹರೀಶ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮೃತ ಹರೀಶ್ ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.