ಕಾರ್ ಮೇಲೆ ತೆಂಗಿನ ಮರ, ವಿದ್ಯುತ್ ಕಂಬ ಬಿದ್ದು ವ್ಯಕ್ತಿ ಸಾವು

ಚಿಕ್ಕಮಗಳೂರು: ಬಿರುಗಾಳಿಗೆ ತೆಂಗಿನ ಮರ, ವಿದ್ಯುತ್ ಕಂಬ ಕಾರ್ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಸಮೀಪ ಲಿಂಗದಹಳ್ಳಿ ಬಳಿ ನಡೆದಿದೆ.

ಚಿಕ್ಕಮಗಳೂರು ತಾಲೂಕು ಮಾಚೇನಹಳ್ಳಿಯ ದೇವರಾಜಾಚಾರ್(38) ಮೃತಪಟ್ಟವರು. ಕಡೂರು ಸಮೀಪದ ಮತಿಘಟ್ಟದಿಂದ ಐದು ಮಂದಿ ತೆರಳುತ್ತಿದ್ದ ವೇಳೆ ಲಿಂಗದಹಳ್ಳಿ ಬಳಿ ಬಿರುಗಾಳಿಯಿಂದಾಗಿ ತೆಂಗಿನ ಮರ ಮತ್ತು ವಿದ್ಯುತ್ ಕಂಬ ವಾಹನದ ಮೇಲೆ ಬಿದ್ದಿವೆ.

ಕಾರ್ ನಲ್ಲಿದ್ದ ದೇವರಾಜಾಚಾರ್ ಮೃತಪಟ್ಟಿದ್ದು, ಕಡೂರು ತಾಲೂಕು ಎರೆಹಳ್ಳಿಯ ಹನುಮಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಹನುಮಪ್ಪನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read