ಸಣ್ಣ ಮಕ್ಕಳಿರುವ ಪೋಷಕರೇ ಗಮನಿಸಿ: ಆಟವಾಡುವಾಗಲೇ ದಾರುಣ ಘಟನೆ: ನೀರು ತುಂಬಿದ ಬಕೆಟ್ ಗೆ ಬಿದ್ದು ಮಗು ಸಾವು

ಶಿವಮೊಗ್ಗ: ನೀರು ತುಂಬಿದ ಬಕೆಟ್ ಗೆ ಬಿದ್ದು ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಸಾಗರದ ಜೋಸೆಫ್ ನಗರ ಬಡಾವಣೆಯಲ್ಲಿ ಭಾನುವಾರ ನಡೆದಿದೆ.

ಆಸಿಫ್ ಅವರ ಪುತ್ರಿ ಆನಮ್ ಫಾತಿಮಾ ಮೃತಪಟ್ಟ ಮಗು. ಮಧ್ಯಾಹ್ನ ಮನೆಯವರು ನಿದ್ದೆ ಮಾಡುತ್ತಿದ್ದ ವೇಳೆಯಲ್ಲಿ ಆಟವಾಡಿಕೊಂಡಿದ್ದ ಮಗು ಮನೆಯ ಮೂಲೆಯಲ್ಲಿದ್ದ ಬಕೆಟ್ ನಿಂದ ನೀರು ತೆಗೆಯಲು ಹೋಗಿದೆ. ಆನಮ್ ಫಾತಿಮಾ ನೀರು ತೆಗೆಯುವಾಗ ಆಯತಪ್ಪಿ ಬಕೆಟ್ ಒಳಗೆ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ತೀವ್ರ ಅಸ್ವಸ್ಥವಾಗಿದ್ದ ಮಗುವನ್ನು ಕೂಡಲೇ ಮನೆಯವರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read