BREAKING : ಕ್ಷಮೆ ಕೇಳದಿದ್ರೆ ಕರ್ನಾಟಕದಲ್ಲಿ ನಿಮ್ಮ ಸಿನಿಮಾ ಯಾಕೆ ಬಿಡುಗಡೆ ಆಗಬೇಕು.? : ‘ಕಮಲ್ ಹಾಸನ್’ ಗೆ ಹೈಕೋರ್ಟ್ ತರಾಟೆ

ಬೆಂಗಳೂರು : ಕ್ಷಮೆ ಕೇಳದಿದ್ರೆ ನಿಮ್ಮ ಸಿನಿಮಾ ಕರ್ನಾಟಕದಲ್ಲಿ ಯಾಕೆ ಬಿಡುಗಡೆ ಆಗಬೇಕು ಎಂದು ನಟ ಕಮಲ್ ಹಾಸನ್ ಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ಕೋರಿ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದು, ಹೈಕೋರ್ಟ್ ನಲ್ಲಿ ನ್ಯಾ ಎಂ ನಾಗಪ್ರಸನ್ನ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.

ಕ್ಷಮೆ ಕೇಳದಿದ್ರೆ ನಿಮ್ಮ ಸಿನಿಮಾ ಕರ್ನಾಟಕದಲ್ಲಿ ಯಾಕೆ ಬಿಡುಗಡೆ ಆಗಬೇಕು..? ಬೇರೆಯವರ ಭಾವನೆಗೆ ಧಕ್ಕೆ ತಂದು ಸಿನಿಮಾ ರಿಲೀಸ್ ಮಾಡಲು ಹೊರಟಿದ್ದೀರಾ..? ನೀವು ಕ್ಷಮೆಯಾಚಿಸಿದರೆ ಸಮಸ್ಯೆಯೇ ಇರಲ್ಲ ಎಂದು ಹೈಕೋರ್ಟ್ ಕಮಲ್ ಹಾಸನ್ ಪರ ವಕೀಲರಿಗೆ ಹೇಳಿದೆ. ನೀವು ಕ್ಷಮೆಯಾಚಿಸದಿದ್ರೆ ಬಿಡಿ..ಕರ್ನಾಟಕದಲ್ಲಿ ಸಿನಿಮಾ ಯಾಕೆ ರಿಲೀಸ್ ಆಗಬೇಕು ಎಂದು ಹೈಕೋರ್ಟ್ ಪ್ರಶ್ನಿಸಿದೆ .ಸದ್ಯ, ಅರ್ಜಿ ವಿಚಾರಣೆಯನ್ನು ಇಂದು ಮಧ್ಯಾಹ್ನ 2:30 ಕ್ಕೆ ಮುಂದೂಡಿದೆ.

ವಿವಾದದ ಹಿನ್ನೆಲೆ

ಕನ್ನಡದ ಬಗ್ಗೆ ನಟ ಕಮಲ್ ಹಾಸನ್ ವಿವಾದಿತ ಹೇಳಿಕೆ ನೀಡಿದ್ದರು. ಕನ್ನಡ ಹುಟ್ಟಿದ್ದು ತಮಿಳುನಿಂದ ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದರು.

ಥಗ್ ಲೈಫ್ ಇವೆಂಟ್ ನಲ್ಲಿ ಭಾಗಿಯಾಗಿದ್ದ ನಟ ಕಮಲ್ ಹಾಸನ್, ಕನ್ನಡದ ಬಗ್ಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ನಟ ಶಿವರಾಜ್ ಕುಮಾರ್ ಎದುರಲ್ಲೇ ಕಮಲ್ ಹಾಸನ್, ಕನ್ನಡದ ಬಗ್ಗೆ ವಿವಾದಾತ್ಮಾ ಹೇಳಿಕೆ ನೀಡಿದ್ದು, ಸಾಮಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರ ಪ್ರೀತಿ, ಗೌರವಕ್ಕೆ ನಮಿಸುತ್ತಲೇ ಕಮಲ್ ಹಾಸನ್ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು. ಕನ್ನಡ ಹುಟ್ಟಿದ್ದು, ನಮ್ಮ ತಮಿಳಿನಿಂದ ಎಂದು ಹೇಳಿದ್ದಾರೆ.

ನಟ ಕಮಲ್ ಹಾಸನ್ ವಿರುದ್ಧ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ತಮಿಳಿಗಿಂತ ಕನ್ನಡ ಭಾಷೆಯೇ ಪುರಾತನವಾದದ್ದು. ಕನ್ನಡ ತಮಿಳಿನಿಂದ ಬಂದಿದ್ದಲ್ಲ ಎಂದು ಗುಡುಗಿದ್ದಾರೆ. ಕಮಲ್ ಹೇಳಿಕೆ ತಮಿಳುಗರ ಶ್ರೇಷ್ಠತೆಯ ವ್ಯಸನ ಎಂದು ಕನ್ನಡಿಗರು ಕಿಡಿಕಾರಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read