ಎರಡನೇ ಪತ್ನಿ ಮಾತು ಕೇಳಿ ಮೊದಲ ಪತ್ನಿ ಮಗನಿಗೆ ಬರೆ ಹಾಕಿದ ತಂದೆ ಅರೆಸ್ಟ್

ಒಡಿಶಾದ ಅಂಗುಲ್‌ ನಲ್ಲಿ ಶಾಲೆಗೆ ಹೋಗದ ಕಾರಣ ಮಗನಿಗೆ ಬಿಸಿ ಕಬ್ಬಿಣದಿಂದ ಬರೆ ಹಾಕಿದ ತಂದೆಯನ್ನು ಬಂಧಿಸಲಾಗಿದೆ.

ಶಾಲೆಗೆ ಹೋಗಲಿಲ್ಲ ಎಂಬ ಕಾರಣಕ್ಕೆ ತಂದೆ ತನ್ನ 12 ವರ್ಷದ ಮಗನಿಗೆ ಕಾದ ಕಬ್ಬಿಣದಿಂದ ಬರೆ ಹಾಕಿದ್ದರಿಂದ ಬಾಲಕನ ಸ್ಥಿತಿ ಗಂಭೀರವಾಗಿದೆ. ಎರಡನೇ ಪತ್ನಿಯ ಪ್ರಚೋದನೆಯಿಂದ ಬಾಲಕನಿಗೆ ಬೈದಾಡಿದ ತಂದೆ ಇಂತಹ ಕ್ರೌರ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಆಘಾತಕಾರಿ ಘಟನೆ ಚೆಂಡಿಪಾಡಾದಲ್ಲಿ ನಡೆದಿದೆ. ಹುಡುಗನಿಗೆ ಅವನ ತಂದೆ ಸುಭಾಷ್ ಪ್ರಧಾನ್ ಚಿತ್ರಹಿಂಸೆ ನೀಡಿದ್ದರು. ಅಪ್ರಾಪ್ತ ಬಾಲಕನಿಗೆ ಆತನ ತಂದೆ ಸುಭಾಷ್ ಮತ್ತು ಮಲತಾಯಿ ಚಿತ್ರಹಿಂಸೆ ನೀಡುತ್ತಿರುವುದು ಇದೇ ಮೊದಲಲ್ಲ. ಅಪ್ರಾಪ್ತ ಬಾಲಕನ ಅಜ್ಜಿ ಆರಂಭದಲ್ಲಿ ಸ್ಥಳೀಯ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ಅವರು ಚೈಲ್ಡ್‌ ಲೈನ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಚೈಲ್ಡ್‌ಲೈನ್ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಅಪ್ರಾಪ್ತ ಬಾಲಕನನ್ನು ರಕ್ಷಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸುಭಾಷ್ ಮತ್ತು ಅವರ ಎರಡನೇ ಪತ್ನಿ ಇಬ್ಬರನ್ನೂ ಚೆಂಡಿಪದ ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read