ನವದೆಹಲಿ: ಭದ್ರಾವತಿಯ ಸೆಲೆಬ್ರೇಶ್ವರಯ್ಯ ಕಬ್ಬಿಣ ಮತ್ತು ಉಪ್ಪು ಕಾರ್ಖಾನೆ(ವಿಐಎಸ್ಎಲ್) ಪುನರುಜ್ಜೀವನಕ್ಕೆ ಸಂಬಂಧಿಸಿದಂತೆ ಕೇಂದ್ರ ಉಕ್ಕು ಸಚಿವಾಲಯ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿದೆ.
ಕೇಂದ್ರ ಉಕ್ಕು ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಕಾಲಮಿತಿಯೊಳಗೆ ವಿಐಎಸ್ಎಲ್ ಕಾರ್ಖಾನೆಯನ್ನು ಪುನರುಜ್ಜೀವನಗೊಳಿಸಲು ದೆಹಲಿಯಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸ್ಥಾವರ(VISL) ಮತ್ತು ಸೇಲಂ ಉಕ್ಕು ಸ್ಥಾವರದ ಪುನರುಜ್ಜೀವನದ ಕುರಿತು ನಡೆದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಹೆಚ್ಡಿ.ಡಿ. ಕುಮಾರಸ್ವಾಮಿ VISL ಹಂತ ಹಂತದ ಆಧುನೀಕರಣ, ಉತ್ಪನ್ನ ವಿಸ್ತರಣೆ ಮತ್ತು ಪ್ರಯೋಗಗಳ ಮೂಲಕ ಪುನರುಜ್ಜೀವನ ತಂತ್ರ ಈಗಾಗಲೇ ಪ್ರಾರಂಭಿಸಲಾಗಿದೆ. ಸೇಲಂ ಉಕ್ಕು ಸ್ಥಾವರದ ಖರೀದಿ ಮತ್ತು ಉತ್ಪಾದನಾ ಯೋಜನೆಗಳು ಜಾಗತಿಕ ಪಾಲುದಾರಿಕೆ ಚರ್ಚೆಯಲ್ಲಿ ಪ್ರಗತಿಯಲ್ಲಿವೆ ಎಂದು ತಿಳಿಸಿದ್ದಾರೆ.
ವಿಐಎಸ್ಎಲ್ ಕಾರ್ಖಾನೆ ಪುನರುಜ್ಜೀವನಕ್ಕೆ 15,000 ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಸಂಡೂರಿನ ರಾಮಘಡ ಅರಣ್ಯ ವಲಯದಲ್ಲಿ ವಿಐಎಸ್ಎಲ್ ಗೆ ಗಣಿ ಪಡೆಯಲು ಪ್ರಯತ್ನ ನಡೆದಿದ್ದು. ಆ ಗಣಿ ಸಿಗದಿದ್ದರೆ ಛತ್ತಿಸ್ಗಢ ಇಲ್ಲವೇ ಜಾರ್ಖಂಡ್ ನಿಂದ ಎನ್.ಎಂ.ಡಿ.ಸಿ.ಯ ಅದಿರು ಪಡೆಯುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.
ವಿಐಎಸ್ಎಲ್ ಅಭಿವೃದ್ಧಿ ಬಗ್ಗೆ ವಿಸ್ತೃತ ಯೋಜನಾ ವರದಿಯನ್ನು ನೀತಿ ಆಯೋಗ ಪರೀಶೀಲನೆ ನಡೆಸಲಿದ್ದು, ನಂತರ ಪ್ರಧಾನಿ ಸಚಿವಾಲಯದಿಂದ ಪರಿಶೀಲನೆ ನಡೆಸಲಾಗುವುದು. ಬಳಿಕ ವಿಐಎಸ್ಎಲ್ ಕಾರ್ಖಾನೆ ಪುನರುಜ್ಜೀವನ ಪ್ಯಾಕೇಜ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ಸಾಧ್ಯತೆ ಇದೆ.
Chaired a review meeting today on the revival of Visvesvaraya Iron and Steel Plant (VISL), Bhadravathi and Salem Steel Plant.
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 3, 2025
At VISL, the revival strategy through phased modernization, product basket expansion and forging trials has already begun, while at Salem Steel Plant,… pic.twitter.com/k7z8NEPnbt
📍
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) September 3, 2025
New Delhi
Chaired a review meeting today on the revival of Visvesvaraya Iron and Steel Plant (VISL), Bhadravathi & Salem Steel Plant.
• VISL: Revival strategy through phased modernization, expansion of product basket & forging trials already initiated.
• Salem Steel… pic.twitter.com/x7pOgME4II