BIG NEWS : ನಾಳೆ ಸಿಎಂ ಸಿದ್ದರಾಮಯ್ಯ ಬಳ್ಳಾರಿ ಪ್ರವಾಸ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ.!

ಬಳ್ಳಾರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.27 ರಂದು ನಾಳೆ ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ನ.27 ರಂದು ಮಧ್ಯಾಹ್ನ 03 ಗಂಟೆಗೆ ಬೆಂಗಳೂರಿನ ಹೆಚ್ಎಎಲ್ನ ವಿಮಾನ ನಿಲ್ದಾಣದಿಂದ (ವಿಶೇಷ ವಿಮಾನದ ಮೂಲಕ) ನಿರ್ಗಮಿಸಿ ಸಂಜೆ 03.50 ಕ್ಕೆ ತೋರಣಗಲ್ನ ಜಿಂದಾಲ್ನ ಏರ್ಸ್ಟಿಪ್ ಗೆ ಆಗಮಿಸುವರು.
ನಂತರ ಸಂಜೆ 04 ಗಂಟೆಗೆ ತೋರಣಗಲ್ನ ಜಿಂದಾಲ್ ಏರ್ಸ್ಟಿಪ್ನಿಂದ ಹೊರಟು, 04.30 ಗಂಟೆಗೆ ಬಳ್ಳಾರಿ ನಗರದ ಇಂದಿರಾನಗರದ ಬಳ್ಳಾರಿ ಆರೋಗ್ಯಮಾತೆ ಪುಣ್ಯಕ್ಷೇತ್ರ ಆವರಣದಲ್ಲಿ ಆಯೋಜಿಸಿರುವ ಬಳ್ಳಾರಿ ಆರೋಗ್ಯಮಾತೆ ಅಮೃತ ಸಂಭ್ರಮಾತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಬಳಿಕ ಸಂಜೆ 06 ಗಂಟೆಗೆ ಅಲ್ಲಿಂದ ಹೊರಟು, ಸಂಜೆ 06.30 ಗಂಟೆಗೆ ತೋರಣಗಲ್ನ ಜಿಂದಾಲ್ ಏರ್ಸ್ಟಿಪ್ಗೆ ಆಗಮಿಸಿ, 06.40 ಕ್ಕೆ ವಿಶೇಷ ವಿಮಾನದ ಮೂಲಕ ಮೈಸೂರಿಗೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿ ಕೆ.ಚಿರಂಜೀವಿ ಅವರು ತಿಳಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read