BIG NEWS: ಸಿ.ಟಿ.‌ ರವಿಗೆ ಕೌಂಟರ್ ಕೊಟ್ಟ ಸಿದ್ದರಾಮಯ್ಯ ಅಭಿಮಾನಿಗಳು

ಯಾದಗಿರಿ: ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ದರಾಮುಲ್ಲಾಖಾನ್ ಎಂದು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಸಿದ್ದರಾಮಯ್ಯ ಅಭಿಮಾನಿಗಳು ಕೌಂಟರ್ ನೀಡಿದ್ದಾರೆ.

ಯಾದಗಿರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು ಕರಪತ್ರ ಹಂಚಿಕೆ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಸಿದ್ದು ಅಭಿಮಾನಿಗಳ ಬ್ರಿಗೇಡ್ ನಿಂದ ಗೋಡೆಗಳ ಮೇಲೆ ಕರಪತ್ರ ಅಂಟಿಸಿದ್ದಾರೆ.

ಅಲ್ಪಸಂಖ್ಯಾತರ ರಾಮಯ್ಯ, ಅನ್ನರಾಮಯ್ಯ, ಯುವಕರ ರಾಮಯ್ಯ, ಸಿಂಗಲ್ ಸಿಂಹ ರಾಮಯ್ಯ ಸೇರಿದಂತೆ ವಿವಿಧ ಹೆಸರುಗಳಿರುವ ಕರಪತ್ರಗಳನ್ನು ಯಾದಗಿರಿಯ ಹಲವೆಡೆ ಅಂಟಿಸುವ ಮೂಲಕ ಸಿ.ಟಿ. ರವಿಯವರಿಗೆ ಕೌಂಟರ್ ನೀಡಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read